Posts

ಎಸ್ಸೆಸ್ಸೆಫ್ ಪ್ರತಿಭೋತ್ಸವದ ಸ್ಪರ್ಧೆಗಳು ಸಮುದಾಯಕ್ಕೆ ಶೈಕ್ಷಣಿಕ ಪ್ರೇರಕವಾಗಿ ಮೂಡಿಬರಲಿ; ಎಂ.ಎಲ್.ಸಿ‌ ಹರೀಶ್ ಕುಮಾರ್ ಕಾಜೂರಿನಲ್ಲಿ ಜಿಲ್ಲಾ ಎಸ್ಸೆಸ್ಸೆಫ್ ಪ್ರತಿಭೋತ್ಸವ

1 min read





ಬೆಳ್ತಂಗಡಿ: ಬಡತನ ಯಾವತ್ತೂ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಾರದು. ಸಂವಿಧಾನ ರಚಿಸಿದ ಡಾ.‌ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಪತಿಯಾಗಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಪಡೆದಿದ್ದ ಶಿಕ್ಷಣ ಅವರನ್ನು ಎತ್ತರದ ಸ್ಥಾನಕ್ಕೆ ಏರಿಸಿರುವುದನ್ನು ನಾವೆಲ್ಲಾ ತಿಳಿದುಕೊಂಡವರು. ಮುಂದುವರಿಯುತ್ತಿರುವ ದೇಶದಲ್ಲಿ   ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿರುವುದು ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಿದೆ. ಈ ನಿಟ್ಟಿನಲ್ಲಿ ಈ ಸ್ಪರ್ಧೆಗಳು ಈ ಸಮಾಜಕ್ಕೆ ಶೈಕ್ಷಣಿಕ ಪ್ರೇರಕವಾಗಿ ಮೂಡಿಬರಲಿ ಎಂದು ವಿಧಾನ ಪರಿಷತ್ ಶಾಸಕ‌ ಕೆ. ಹರೀಶ್ ಕುಮಾರ್ ಹೇಳಿದರು.

ಎಸ್ಸೆಸ್ಸೆಫ್ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಕಾಜೂರಿನಲ್ಲಿ ನ.20,21 ರಂದು ನಡೆಯುತ್ತಿರುವ ಜಿಲ್ಲಾ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ 

ಸಭಾ ಕಾರ್ಯಕ್ರಮ ಉದ್ಘಾಟಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಈಸ್ಟ್ ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿ ಮಂಡೆಕೋಲು ವಹಿಸಿದ್ದರು.

ಸಮಾರಂಭದಲ್ಲಿ ಎಸ್‌ವೈಎಸ್ ಕಾಜೂರು ಶಾಖೆ ನಿಕಟಪೂರ್ವ ಅಧ್ಯಕ್ಷ ಕೆ.ಯು ಮುಹಮ್ಮದ್ ಸಖಾಫಿ, ಪ್ರತಿಭೋತ್ಸವ ಸಮಿತಿ ಚೇರ್ಮೆನ್ ಕೆ.ಎಮ್ ಅಬೂಬಕ್ಕರ್ ಕುಕ್ಕಾವು ಶುಭ ಕೋರಿದರು.


ವೇದಿಕೆಯಲ್ಲಿ ಕಾಜೂರು ಆಡಳಿತ ಸಮಿತಿ ಪ್ರ.‌ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಪ್ರತಿಭೋತ್ಸವ ಸಮಿತಿ ಕನ್ವೀನರ್ ಅಬ್ದುಲ್ ಅಝೀಝ್ ಜಿ.ನಗರ, ಕೋಶಾಧಿಕಾರಿ ಡಿ.ವೈ ಉಮರ್ ಕುಕ್ಕಾವು, ಎಸ್ಸೆಸ್ಸೆಫ್ ಕಾಜೂರು ಶಾಖೆ ಅಧ್ಯಕ್ಷ ಎಂ.ಕೆ ಸಿರಾಜ್, ಪ್ರಮುಖರಾದ ಮುಹಮ್ಮದ್ ಆಲಿ, ಹೈದರಾಲಿ ಕಾಜೂರು, ಕೆ.ಪಿ ಮುಹಮ್ಮದ್, ಮಜೀದ್ ಕುಕ್ಕಾವು, ಮುಹಮ್ಮದ್ ಶರೀಫ್ ಹೈಟೆಕ್, ಅಶ್ಪಾಕ್, ಕೆ.ಹೆಚ್ ಸಿದ್ದೀಕ್, ಮುಹಮ್ಮದ್ ಕಾಜೂರು ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ಪ್ರಸ್ತಾವನೆಗೈದರು. ಕೋಶಾಧಿಕಾರಿ ಶರೀಫ್ ಬೆರ್ಕಳ ನಿರೂಪಿಸಿದರು. ಇಕ್ಬಾಲ್ ಮಾಚಾರು ವಂದಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment