Posts

ತೆಕ್ಕಾರು ಕಾಪಿಗುಡ್ಡೆ ರಸ್ತೆ ದುರಸ್ತಿ; ಗ್ರಾ.ಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕಾರ್ಯಕ್ಕೆ ಶ್ಲಾಘನೆ

ಬೆಳ್ತಂಗಡಿ;  ತೆಕ್ಕಾರು ಗ್ರಾಮದ ಕಾಪಿಗುಡ್ಡೆ -ಕಣರಾಜೆ ರಸ್ತೆಯು ಚಂಡಮಾರುತ ಪರಿಣಾಮ ಸುರಿದ ಅಕಾಲಿಕ ಮಳೆಯಿಂದ ಕೆಸರುಮಯವಾಗಿ ಜನರಿಗೆ ಸಂಚರಿಸಲು ಸಮಸ್ಯೆಯಾದಾಗ ತಜ್ಷಣ ಸ್ಪಂದಿಸಿದ ತೆಕ್ಕಾರು ಗ್ರಾ.ಪಂ ಅಧ್ಯಕ್ಷರೂ ಆಗಿರುವ ಅಬ್ದುಲ್ ರಝಾಕ್ ಅವರು ದುರಸ್ತಿಗೊಳಿಸಿ ಗ್ರಾಮಸ್ಥರ ಶ್ಲಾಘನೆಗೆ ಒಳಗಾಗಿದ್ದಾರೆ..

ಸದ್ರಿ‌ ರಸ್ತೆಯ ದುರವಸ್ತೆ ಬಗ್ಗೆ ಈ ಭಾಗದ ಜನರು ತೆಕ್ಕಾರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. 

ಇದನ್ನು ಪಂಚಾಯತ್ ಅಧ್ಯಕ್ಷರು, ಆ ಭಾಗದ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿವರ್ಗದವರು ಭೇಟಿಕೊಟ್ಟು ಪರಿಶೀಲಿಸಿ ಸಮಸ್ಯೆ ಅರ್ಥೈಸಿಕೊಂಡು ಶೀಘ್ರದಲ್ಲೇ ದುರಸ್ತಿ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ. ಅಲ್ಲದೆ ಚರಂಡಿ ವ್ಯವಸ್ಥೆಗೆ ಪಂಚಾಯತ್ ಅಧ್ಯಕ್ಷರು ಸ್ವಂತ ಕೈಯಿಂದ ಆರ್ಥಿಕ ನೆರವು  ಕೂಡ ಮಾಡಿದ್ದು, ಇತರರಿಗೆ ಮಾದರಿಯಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official