ತಾಲೂಕು ಮುಸ್ಲಿಂ ಜಮಾಅತ್ ಬೆಳ್ತಂಗಡಿ "ಸಹಾಯ್" ತಂಡ ನೇತೃತ್ವದಲ್ಲಿ ತಾಲೂಕು ಮಟ್ಟದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆ, ಮಿನಿವಿಧಾನಸೌಧ, ಪೊಲೀಸ್ ಠಾಣೆ, ಪಟ್ಟಣ ಪಂಚಾಯತ್ ಆವರಣ ಸ್ವಚ್ಚತೆ
2 min read
ಸಯ್ಯಿದ್ ಸಾದಾತ್
ಉದ್ಘಾಟನೆ ನೆರವೇರಿಸಿದರು
ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ನೇತೃತ್ವ ಹಾಗೂ ಎಸ್ವೈಎಸ್, ಎಸ್ಸೆಸ್ಸೆಫ್, ಕೆಸಿಎಫ್ ಸಹಭಾಗಿತ್ವದ ಸಹಾಯ್ ಬೆಳ್ತಂಗಡಿ ಸರ್ಕಲ್ ವತಿಯಿಂದ, ರಾಜ್ಯ ಸಮಿತಿ ನಿರ್ದೇಶನದಂತೆ ಸಾಮುದಾಯಿಕ ಸ್ವಚ್ಚತಾ ಅಭಿಯಾನ ತಾಲೂಕು ಮಟ್ಟದ ಕಾರ್ಯಕ್ರಮದ ಉದ್ಘಾಟನೆಯು ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ನಡೆಯಿತು.
ಪಟ್ಟಣ ಪಂಚಾಯತ್ ಚೀಫ್ ಆಫೀಸರ್ ಎಂ.ಜೆಚ್ ಸುಧಾಕರ್ , ಇಂಜಿನಿಯರ್ ಮಹಾವೀರ ಆರಿಗಾ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಎಸ್.ಎಂ ಕೋಯ ತಂಙಳ್ ಉಜಿರೆ ವಹಿಸಿದ್ದರು.
ಎಸ್ವೈಎಸ್, ಎಸ್ಸೆಸ್ಸೆಫ್ ಸನ್ನದ್ಧ ಸಹಾಯ್ ತಂಡದಿಂದ ಶ್ರಮಾದಾನ
ಉದ್ಘಾಟನೆಯನ್ನು ಸುನ್ನೀಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ನೆರವೇರಿಸಿದರು. ಸಮಾರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ಸಾದಿಕ್ ಮಲೆಬೆಟ್ಟು , ಸಹಾಯಿ ಸೆಂಟರ್ ಡೈರೆಕ್ಟರ್ ಗಳಾದ ರಶೀದ್ ಬಲಿಪಾಯ ಮತ್ತು ಹಂಝ ಮದನಿ, ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬ್ಬೋನು ಮದ್ದಡ್ಕ, ಕೋಶಾಧಿಕಾರಿ ಎ.ಕೆ ಅಹಮ್ಮದ್, ನಾಲ್ಕು ಸೆಂಟರ್ ಅಮೀರ್ಗಳಾದ ಜಮಾಲುದ್ದೀನ್ ಲೆತೀಫಿ, ಪಿ.ಯು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಾವೂರು, ಫಾರೂಕ್ ಸಖಾಫಿ ವೇಣೂರು, ಕಾಸಿಂ ಮುಸ್ಲಿಯಾರ್ ಮಾಚಾರು, ಎಸ್ಸೆಸ್ಸೆಫ್ ಡಿವಿಷನ್ ಅಧ್ಯಕ್ಷ ಹಾರಿಸ್ ಕುಕ್ಕುಡಿ, ಕೋಶಾಧಿಕಾರಿ ಝಮೀರ್ ಸಅದಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಶರೀಫ್ ಬೆರ್ಕಳ, ಮೀಡಿಯಾ ಕನ್ವೀನರ್ ಮುಬೀನ್ ಉಜಿರೆ, ಅನಿವಾಸಿ ಪ್ರತಿನಿಧಿಗಳಾದ ಸಲೀಂ ಕನ್ಯಾಡಿ ಮತ್ತು ಅಬ್ದುಲ್ ಕರೀಂ ಲೆತೀಫಿ,ಉಮರ್ ಗೇರುಕಟ್ಟೆ ಪ್ರಮುಖರಾದ ಶರೀಫ್ ಸಖಾಫಿ ನೆಕ್ಕಿಲ್, ನಾಸಿರ್, ರಶೀದ್ ಮಡಂತ್ಯಾರು, ಸಿದ್ದೀಕ್ ಪರಪ್ಪು, ಇಕ್ಬಾಲ್ ಮಾಚಾರ್, ಅಬ್ದುಲ್ ರಹಿಮಾನ್ ಮೊದಲೆ, ನಝೀರ್ ಮದನಿ, ಮೊದಲಾದವರು ಭಾಗಿಯಾಗಿದ್ದರು.
ಸಮಾಜ ಸೇವಕ, ಯುವ ಉದ್ಯಮಿ ಎಲ್. ಹಕೀಂ ಧರ್ಮಸ್ಥಳ ಅವರು, ಬೆಳ್ತಂಗಡಿ ಪೊಲೀಸ್ ಠಾಣೆಯ ಬಳಿ ಶ್ರಮಾದಾನದ ವೇಳೆ ಭೇಟಿ- ಮೆಚ್ಚುಗೆ ವ್ಯಕ್ತಪಡಿಸಿ, 5 ಸಾವಿರ ರೂ. ದೇಣಿಗೆ ವಾಗ್ದಾನ ಮಾಡಿದರು
ಸನ್ನದ್ದ ತಂಡ; ಕಾರ್ಯಕ್ರಮದ ಅಂಗವಾಗಿ ಸಮುದಾಯ ಆಸ್ಪತ್ರೆ ಬೆಳ್ತಂಗಡಿ, ಮಿನಿ ವಿಧಾನಸೌಧ, ಪೊಲೀಸ್ ಠಾಣೆ ಮತ್ತು ಪಟ್ಟಣ ಪಂಚಾಯತ್ ಆವರಣದಲ್ಲಿ 100 ಕ್ಕೂ ಅಧಿಕ ಸನ್ನದ್ಧ ಕಾರ್ಯಕರ್ತರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಜಾಮಿಯಾ ಮಸ್ಜಿದ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ,ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ ಶುಭ ಹಾರೈಸಿದರು. ಈ ವೇಳೆ ಖಾಲಿದ್ ಪುಲಾಬೆ, ಆಲಿಯಬ್ಬ ಪುಲಾಬೆ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್, ಮೊದಲಾದವರು ಭಾಗಿಯಾದರು. ಸಮಾಜ ಸೇವಕ ಎಲ್ ಹಕೀಂ ಧರ್ಮಸ್ಥಳ ಭೇಟಿ ನೀಡಿ ಆರ್ಥಿಕ ಸಹಕಾರ ಘೋಷಿಸಿದರು. ಸಮಾಡೈನ್ ಹೊಟೇಲ್ ಮಾಲಿಕ ಅಬೂಬಕ್ಕರ್ ಪ್ರಾಯೋಜಕತ್ವ ನೀಡಿದರು.
ಸಮಾರೋಪ ಕಾರ್ಯಕ್ರಮ ದಲ್ಲಿ ಭಾಗಿಯಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮತ್ತು ಗಣ್ಯರು
ತಾ. ಆರೋಗ್ಯಾಧಿಕಾರಿ ಡಾ. ಕಲಾಮಧು, ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಆಶಾ ಮೇಲ್ವಿಚಾರಕಿ ಹರಿಣಿ, ಅಜಯ್ ಕಲ್ಲೆಗ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗಾ, ಲಕ್ಷ್ಮೀನಾರಾಯಣ, ಸಚಿನ್ ಮೊದಲಾದವರು ಭೇಟಿ ನೀಡಿ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಟಿಹೆಚ್ಒ ಕಲಾಮಧು ಉಪಾಹಾರದ ವ್ಯವಸ್ಥೆ ರೂಪಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಮಾಜಿ ಸೈನಿಕ ಮುಹಮ್ಮದ್ ರಫಿ ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಹಾಯ್ ತಂಡದ ಪಿಆರ್ಒ ಅಶ್ರಫ್ ಅಲಿಕುಂಞಿ,ಮುಂಡಾಜೆ ವಂದಿಸಿದರು.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ.
ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ.
ಆದ್ದರಿಂದ ಕಾಲದ ವೇಗದ ಜೊತೆಗೆ…