ಬೆಳ್ತಂಗಡಿ: ರಾಜಕೇಸರಿ ಸಂಘಟನೆಯ ಸಕ್ರೀಯ ಸದಸ್ಯ ನಾಗೇಶ್ ಬೈಲು ಮತ್ತು ಉಷಾಲತಾ ದಂಪತಿ ತನ್ನ ವೈವಾಹಿಕ ದಶಮಾನೋತ್ಸವವನ್ನು ಗುರುವಾರ ಬೆಳ್ತಂಗಡಿಯ ವೃದ್ದಾಶ್ರಮದಲ್ಲಿ ಆಚರಿಸುವ ಮೂಲಕ ಮಾದರಿಯಾದರು.
ಬೆಳ್ತಂಗಡಿಯ ಸುಧೆಮುಗೇರುವಿನಲ್ಲಿರುವ ಅನುಗ್ರಹ ಚಾರಿಟೇಬಲ್ ಟ್ರಸ್ಟ್ ರಿ. ಬೆಳ್ತಂಗಡಿ ಇಲ್ಲಿಗೆ ಆಗಮಿಸಿದ ನಾಗೇಶ್ ದಂಪತಿ ಪರಸ್ಪರ ಹಾರ ಬದಲಾಯಿಸಿ, ಕೇಕ್ ಕತ್ತರಿಸಿ ಆಶ್ರಮ ವಾಸಿಗಳಿಗೆ ಹಂಚಿದ್ದೂ ಮಾತ್ರವಲ್ಲದೆ ತಮ್ಮ ವತಿಯಿಂದ ಮಧ್ಯಾಹ್ನದ ಊಟ ವನ್ನೂ ಪ್ರಾಯೋಜಿಸಿ ಅವರ ಜೊತೆ ಸಹಭೋಜನ ನಡೆಸಿ ಸಂಭ್ರಮಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಗೇಶ್ ಅವರ ತಂದೆ ತಿಮ್ಮಪ್ಪ ಪೂಜಾರಿ, ತಾಯಿ ಶಾಂತಮ್ಮ, ಅತ್ತೆ ಕಮಲಾ ಅವರ ಹಾಗೂ ಆಶ್ರಮವಾಸಿಗಳಾದ ಎಲ್ಲ ಹಿರಿಯರ ಕಾಲಿಗೆರಗಿ ಆಶೀರ್ವಾದ ಪಡೆದರು.
ಈ ವಿಶೇಷ ಕಾರ್ಯಕ್ರಮ ಸಂಯೋಜಿಸಿದ ದಂಪತಿಯನ್ನು ಲೈವ್ ಮೀಡಿಯಾ ನ್ಯೂಸ್ ಚೇರ್ಮನ್ ಏಂಡ್ ಪ್ರಿನ್ಸಿಪಲ್ ಎಡಿಟರ್ ಅಶ್ರಫ್ ಆಲಿಕುಂಞಿ ಮುಂಡಾಜೆ, ಆಶ್ರಮದ ಮೇಲ್ವಿಚಾರಕಿ, ಸಿಸ್ಟರ್ ಅಂಬಿಕಾ, ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ ಅಭಿನಂದಿಸಿದರು. ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ, ದಂಪತಿಯ ಮಕ್ಕಳಾದ ವರ್ಷಿಣಿ ಮತ್ತು ಅನ್ವಿತ್, ಮನೆಯವರಾದ ಮನುಶ್ರೀ, ಪ್ರವೀಣ್, ಲಾವಣ್ಯಾ, ರಾಜಕೇಸರಿ ತಾ. ಅಧ್ಯಕ್ಷ ಕಾರ್ತಿಕ್, ಸದಸ್ಯರಾದ ಲೋಕೇಶ್, ರಾಜೇಶ್ ಇವರು ಉಪಸ್ಥಿತರಿದ್ದರು.
----
ನಾಗೇಶ್- ಉಷಾಲತಾ ದಂಪತಿ ವೈವಾಹಿಕ ದಶಮಾನೋತ್ಸವ ಪ್ರಯುಕ್ತ ಆಶ್ರಮವಾಸಿಗಳಿಗೆ ಹಣ್ಣು ಹಂಪಲು ಮತ್ತು ಒಂದು ಮೂಟೆ ಅಕ್ಕಿಯನ್ನೂ ದಾನವಾಗಿ ಹಸ್ತಾಂತರಿಸಿದರು.