Posts

ಫೆಬ್ರವರಿ 4 ಕ್ಕೆ: ಬೊಳ್ಮಿನಾರ್ ಮಖಾಂ ಉರೂಸ್

1 min read


ಬೆಳ್ತಂಗಡಿ; ತಾಲೂಕಿನ ಪುದುವೆಟ್ಟು ಗ್ರಾಮ ಬೊಳ್ಮಿನಾರ್ ಎಂಬ ಪ್ರದೇಶದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ, ಹಲವು ಪವಾಡಗಳಿಂದ ಪ್ರಸಿಧ್ಧಿ ಪಡೆದಂತಹ ಬೊಳ್ಮಿನಾರ್ ಶುಹದಾನಗರ ಮಖಾಂ ಉರೂಸ್ ಫೆಬ್ರವರಿ 2ರಿಂದ ಫೆಬ್ರವರಿ 4 ರತನಕ ಜರಗಲಿದೆ.

ಫೆಬ್ರವರಿ 2 ರಂದು ಬೆಳಗ್ಗೆ 10 30 ಕ್ಕೆ ಜಮಾಅತ್ ಅಧ್ಯಕ್ಷ ಅಬ್ದುಲ್ ಗಫೂರ್ ಇವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಸ್ಥಳೀಯ ಖತೀಬ್ ಅಹ್ಮದ್ ಅಲಿ ಇರ್ಫಾನಿ ಉದ್ಘಾಟನೆ ಮಾಡಲಿದ್ದಾರೆ. ಜಮಲಾಬಾದ್ ಖತೀಬ್ ಅಬ್ದುಲ್ ಖಾದರ್ ಮಿಸ್ಬಾಹಿ ಮುಖ್ಯ ಭಾಷಣ ಮಾಡಲಿದ್ದಾರೆ. ಫೆಬ್ರವರಿ 3ರಂದು ಝೈದ್ ಬಾ ಹಸನಿ ಕಕ್ಕಿಂಜೆ ಪ್ರಭಾಷಣ ಮಾಡಲಿದ್ದಾರೆ. ಸಮಾರೋಪ ಸಮಾರಂಭ ಮತ್ತು‌ ಉರೂಸ್ ಕಾರ್ಯಕ್ರಮ ಫೆಬ್ರವರಿ 4 ರಂದು ರಾತ್ರಿ 7 30 ಕ್ಕೆ ಆರಂಭವಾಗಲಿದೆ. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ಅಧ್ಯಕ್ಷತೆ ಮತ್ತು ದುವಾಕೆ ನೇತ್ರತ್ವ ನೀಡಲಿದ್ದಾರೆ. ಈಶ್ವರಮಂಗಳ ಟೌನ್ ಜುಮಾ ಮಸೀದಿ ಖತೀಬ್ ನಝೀರ್ ಅಝ್ಹರಿ ಬೊಳ್ಮಿನಾರ್ ಉಧ್ಘಾಟನೆಗೈಯಲಿದ್ದಾರೆ. ಖ್ಯಾತ ವಾಗ್ಮಿ ಅಬ್ದುಲ್ ಕರೀಂ ಫೈಝಿ ಕುಂತೂರು ಮುಖ್ಯ ಭಾಷಣ ನಡೆಸಲಿದ್ದಾರೆ.

ಸಮಾರಂಭದಲ್ಲಿ ವಕ್ಫ್ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಖಿಸ್ಟಾರ್, ಉಪಾಧ್ಯಕ್ಷರಾದ ಫಕೀರಬ್ಬ ಮರೋಡಿ ಮತ್ತು ಎ.ಕೆ ಜಮಾಲ್, ಸದಸ್ಯರಾದ ‌ಜೆ.ಹೆಚ್ ಅಬೂಬಕ್ಕರ್ ಸಿದ್ಧೀಕ್ ಕಾಜೂರು, ಮೂಸಾ ದಾರಿಮಿ ಕಕ್ಕಿಂಜೆ, ಇಬ್ರಾಹಿಂ ಸಖಾಫಿ  ಕನ್ಯಾಡಿ, ಶಂಸುದ್ದೀನ್ ಅಶ್ರಫಿ ಕಕ್ಕಿಂಜೆ, ಎಸ್. ಎಂ. ಕೋಯ ತಂಙಳ್ ಉಜಿರೆ, ಮುಹಮ್ಮದ್ ಶರ್ವಾನಿ ನೆರಿಯ, ಸಲೀಂ ಫೈಝಿ ಜಲಾಲಿಯನಗರ, ಹನೀಫ್ ಮದನಿ ಕಾಯರ್ತಡ್ಕ, ಬಿ. ಎಂ ಹಮೀದ್ ಉಜಿರೆ, ತಾಲೂಕು ಮುಸ್ಲಿಂ ಉಕ್ಕೂಟದ ಅಧ್ಯಕ್ಷ ಬಿ.ಎ  ನಝೀರ್ ಬೆಳ್ತಂಗಡಿ, ಹಮೀದ್ ಇಂಜಿನಿಯರ್, ರಝಾಕ್ ಕನ್ನಡಿಕಟ್ಟೆ, ಸಿದ್ದೀಕ್ ಕನ್ಯಾಡಿ, ನಾಸಿರ್ ಮಾಸ್ಟರ್ ಉಪ್ಪಿನಂಗಡಿ, ಅಬೂಬಕರ್ ಕೋಲ್ಪೆ, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಹೈದರ್ ಕೊಕ್ಕಡ ಮುಂತಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಬೊಳ್ಮನಾರ್ ಜಮಾಅತ್ ಕಾರ್ಯದರ್ಶಿ ಸಿದ್ದೀಕ್ ಎ.ಯು ಅಲಪಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment