Posts

ಉಜಿರೆಯಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದ ಸುದ್ದಿ ಎಂಟರ ಹರೆಯದ ಬಾಲಕನ ಅಪಹರಣ!

0 min read

ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಗುರುವಾರ ಸಂಜೆವೇಳೆ ಆಟವಾಡುತ್ತಿದ್ದ 8 ವರ್ಷದ ಬಾಲಕನನ್ನು ಕಾರಿನಲ್ಲಿ‌ ಬಂದಿದ್ದ ನಾಲ್ವರು ಅಪಹರಿಸಿದ್ದಾರೆ ಎಂಬ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ.

ಉಜಿರೆ ಉದ್ಯಮಿಯೋರ್ವರ ಪುತ್ರ ಆಟವಾಡುತ್ತಿದ್ದ ಸಂದರ್ಭ ಇಂಡಿಕಾ ಕಾರಿನಲ್ಲಿ ಬಂದಿದ್ದರೆನ್ನಲಾದ ನಾಲ್ವರು ಕೃತ್ಯವೆಸಗಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದೆದ್ದಿದೆ.

ಆಗಂತುಕರು ಕಾರನ್ನು ಚಾರ್ಮಾಡಿ ರಸ್ತೆ ಕಡೆ ತಿರುಗಿಸಿದ್ದಾರೆ ಎಂದು ವಾಟ್ಸ್ ಆಪ್ ನಲ್ಲಿ ಸಂದೇಶ ಹರಿಯಬಿಡಲಾಗಿದ್ದು, ಪೊಲೀಸರು ನಾಕಾಬಂದಿ ಕೈಗೊಂಡಿದ್ದಾರೆ.

ಸಾರ್ವಜನಿಕರೂ ಕೂಡ ಎಚ್ಚೆತ್ತಿದ್ದು ಕೆಲವೆಡೆ ಅವರೂ ಕೂಡ ಪೊಲೀಸರಿಗೆ ಸಹಕಾರಿಯಾಗಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯನ್ನು ವಿಚಾರಿಸಿದಾಗ, ಘಟನೆ ನಡೆದಿದೆ ಎಂದು ಮಾಹಿತಿ ಲಭಿಸಿದೆ. ಆದರೆ ಅಧಿಕೃತ ದೂರು ಪ್ರಕ್ರಿಯೆ ಆಗಿಲ್ಲ ಎಂದು ತಿಳಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment