Posts

ಬೈಕ್ -ರಿಕ್ಷಾ‌ ಮಧ್ಯೆ ಅಪಘಾತ: ಮಡಂತ್ಯಾರು ಕಾಲೇಜು ವಿದ್ಯಾರ್ಥಿ ದಾರುಣ ಅಂತ್ಯ

0 min read


ಬೆಳ್ತಂಗಡಿ: ಮಡಂತ್ಯಾರು ಸನಿಹದ ನಡುಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ ಅಟೋ ಬೈಕ್ ಮತ್ತು ರಿಕ್ಷಾ‌ ನಡುವೆ ನಡೆದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ದಾರುಣವಾಗಿ ಅಸುನೀಗಿದ್ದಾರೆ‌ ಎಂಬ ಮಾಹಿತಿ ಬಂದಿದೆ. 

ಮೃತರನ್ನು ಮಡಂತ್ಯಾರು ಬಳಿಯ ಪಾರೆಂಕಿ ನಿವಾಸಿ ವಸಂತ ನಾಯಕ್ ಅವರ  ಪುತ್ರ ಶಿವಪ್ರಸಾದ್ (19 ವ) ಎಂದು ಗುರುತಿಸಲಾಗಿದೆ. 

ಶಿವಪ್ರಸಾದ್ ಅವರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಡುಬೆಟ್ಟು ಬಳಿ ರಾತ್ರಿ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಶಿವಪ್ರಸಾದ್ ಅವರು ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿ ಪ್ರಥಮ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ಆರಂಭಿಕ ಮಾಹಿತಿ ಲಭಿಸಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment