ಬೆಳ್ತಂಗಡಿ; ಕರ್ನಾಟಕ ಸರಕಾರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಶುಲ್ಕವನ್ನು 0.35% ಇದ್ದುದನ್ನು 1. % ಕ್ಕೆ ಏರಿಸಿರುವುದರಿಂದ ಕೃಷಿ ರಂಗಕ್ಕೆ ಆತಂಕವಿದೆ ಎಂದು ಸದ್ರಿ ನೀತಿಯನ್ನು ವಿರೋಧಿಸಿ ತಾಲೂಕಿನ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರಸ್ತ ಸುಮಾರು 140 ರಷ್ಟು ಮಳಿಗೆದಾರರು ತಮ್ಮ ವ್ಯವಹಾರ ಡಿ.22 ರಂದು ತಮ್ಮ ವ್ಯವಹಾರ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ವರ್ತಕ ಪ್ರಮುಖರಾದ ಉಮರ್ಕುಂಞಿ ನಾಡ್ಜೆ, ಬಾಲಕೃಷ್ಣ ಶೆಟ್ಟಿ ಸವಣಾಲು, ಸತೀಶ್ ಶೆಟ್ಟಿ, ಪುಷ್ಪರಾಜ್ ಹೆಗ್ಡೆ ಮಡಂತ್ಯಾರು, ಇಸ್ಮಾಯಿಲ್ ಮಂಗಳೂರು ಸುಪಾರಿ, ವಿ.ಕೆ.ಫಾರೂಕ್, ಪ್ರಕಾಶ್ ಶೆಟ್ಟಿ, ಪದ್ಮರಾಜ್, ಪ್ರಶಾಂತ್ ಶೆಟ್ಟಿ,ಹೈದರ್ ಮಡಂತ್ಯಾರು, ಶಂಶುದ್ದೀನ್ ಜಾರಿಗೆಬೈಲು, ಸತ್ಯೇಂದ್ರ ಜೈನ್, ದರ್ಶನ್, ಸದಾನಂದ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಎಪಿಎಂಸಿ ಮತ್ತು ತಾಲೂಕು ಕಚೇರಿಯ ಎದುರು ಸಾಂಕೇತಿಕ ಪ್ರತಿಭಟನೆ ಕೈಗೊಂಡು ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದರು.