Posts

ಬೈಕ್ ಸ್ಕೂಟರ್ ಅಪಘಾತ- ಸ್ಕೂಟರ್ ಸವಾರ ಸಾವು- ಮತ್ತೋರ್ವ ಗಂಭೀರ

0 min read

ಬೆಳ್ತಂಗಡಿ: ಇಲ್ಲಿನ ಬಂಗಾಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ಮತ್ತು ಸ್ಕೂಟರ್ ಅಪಘಾತವಾಗಿದ್ದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತಪಟ್ಟವರನ್ನು‌ ಕಿಲ್ಲೂರಿನ ಕರಿಯು ಮನೆಯ ಜನಾರ್ದನ ಗೌಡ  ಅವರ ಪುತ್ರ ಗೋಪಾಲಕೃಷ್ಣ(19ವ.) ಎಂಬವರೆಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ 9 ಗಂಟೆ ವೇಳೆಗೆ  ಬೆಳ್ತಂಗಡಿಯ ಲಾಯಿಲ ಕಡೆಯಿಂದ ಕಿಲ್ಲೂರು ಕಡೆಗೆ ಪ್ರತಿಶಾ ಅವರು ಬೈಕ್  ನಲ್ಲಿ ಬರುತ್ತಿದ್ದ ವೇಳೆ ಕಿಲ್ಲೂರು ಕಡೆಯಿಂದ ಲಾಯಿಲ ಬರುತ್ತಿದ್ದ ಗೋಪಾಲಕೃಷ್ಣ ಎಂಬವರ ಬೈಕ್  ಡಿಕ್ಕಿ ಹೊಡೆದಿದೆ. 

ಅಪಘಾತದಲ್ಲಿ ಇಬ್ಬರು ದ್ವಿಚಕ್ರವಾಹನ ಸವಾರರಿಗೂ ಗಾಯಗಳಾಗಿದ್ದು ಈ ಪೈಕಿ ಗೋಪಾಲಕೃಷ್ಣ ಅವರನ್ನು ಆಸ್ಪತ್ರೆಗೆ ಸಾಹಿಸುವ ಮಧ್ಯೆ ಅವರು ಅಸುನೀಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment