ಬೆಳ್ತಂಗಡಿ; ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಯಲ್ಲಿ 75 ನೇ ಸ್ವಾತಂತ್ರ ದಿನಾಚರಣೆಯ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಸಂಸ್ಥೆಯ ಹಿರಿಯ ನಿರ್ದೇಶಕರಾಗಿರುವ ಇಸುಬು ಸವಣಾಲು ಇವರು ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ತಲ್ಹತ್ ಎಂ ಜಿ ವಹಿಸಿದ್ದರು.
ಸಂಭ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ಮುಹಮ್ಮದ್ ಅಶ್ರಫ್ ಫೈಝಿ,
ಅನುಗ್ರಹ ಜನ ಸೇವಾ ಕೇಂದ್ರದ ಸಿಬ್ಬಂದಿಗಳಾದ ನೌಶಾದ್ ಅಝ್ಹರಿ ಕಕ್ಕಿಂಜೆ, ಆಸಿರ್ ಸವಣಾಲು, ಇಮೇಜ್ ಮೊಬೈಲ್ ಮತ್ತು ಇಮೇಜ್ ಲೈಫ್ ಸ್ಟೈಲ್ ಇದರ ಮಾಲಕ ಮುಹಮ್ಮದ್ ಅರ್ಷದ್ ನಾವೂರು ಹಾಗೂ ಮುಹಮ್ಮದ್ ಅಝರುದ್ದೀನ್ ನಾವೂರು, ಸ್ಪಂದನ ಪಾಲಿಕ್ಲಿನಿಕ್ ಮಾಲಕ ಮೆಲ್ಬಿನ್, ಎಂ ಎನ್ ಕಂಪ್ಯೂಟರ್ ಮಾಲಕ ಹೆರಾಲ್ಡ್, ಬೇಬಿ ಝೋನ್ ದಾವುದುಲ್ ಹಕೀಂ, ವಿಜಯಾನಂದ ಪ್ಲಂಬಿಗ್ ಈಶ್ವರ್ ಸಿಂಗ್, ಸ್ಟೈಲ್ ಝೋನ್ ಇದರ ಅಭಿಜಿತ್ ಭಂಡಾರಿ, ಸಂಸ್ಥೆಯ ಮ್ಯಾನೇಜರ್ ಮುಹಮ್ಮದ್ ಸಾದಿಕ್, ಉಪನ್ಯಾಸಕ ಥೋಮಸ್ ಉಜಿರೆ , ವೀಣಾ ಇವರು ಉಪಸ್ಥಿತರಿದ್ದರು