Posts

ಮಂಜೇಶ್ವರ ಹೊಸಂಗಡಿಯಲ್ಲಿ ರೈಲು ಅಪಘಾತ| ಮುಂಡಾಜೆಯಲ್ಲಿ ನೆಲೆಸಿದ್ದ ಕುಂಞಿಮೋಣಾಕ ಸಾವು

1 min read

ಬೆಳ್ತಂಗಡಿ; ಮಂಜೇಶ್ವರದ ಹೊಸಂಗಡಿಯಲ್ಲಿ 

ಇತ್ತೀಚೆಗೆ ನಡೆದಿದ್ದ ರೈಲು ಅಪಘಾತದಲ್ಲಿ ಮುಂಡಾಜೆಯಲ್ಲಿ ‌ಬಹುವರ್ಷಗಳಿಂದ ನೆಲೆಸಿದ್ದ ಕುಂಞಿಮೋಣಾಕ ಅವರು ದಾರುಣವಾಗಿ ಸಾವನ್ನಪದಪಿದ್ದಾರೆ.

ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಅವರ ಕುಟುಂಬವರ್ಗದವರು ಕೆಲ ತಿಂಗಳುಗಳ ಹಿಂದೆ ಮಂಜೇಶ್ವರದ ಹೊಸಂಗಡಿ ಎಂಬಲ್ಲಿನ ಅವರ ಕೌಟುಂಬಿಕರ ಜೊತೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರಿಗೆ ಮತ್ತಷ್ಟು ಅನಾರೋಗ್ಯ‌ ಉಲ್ಬಣಿಸಿ  ಸ್ಮರಣೆ ಶಕ್ತಿ ಕಳೆದುಕೊಂಡಿದ್ದರು. ಅಲ್ಲದೆ ಅರೆಸ್ಮೃತಿಯಲ್ಲಿದ್ದ ಅವರು ತನ್ನ ಮುಂದೆ ಯಾರೇ ಬಂದರೂ ಗುರುತಿಸಲು ಅಸಾಧ್ಯರಾಗಿದ್ದರು. ಇತ್ತೀಚೆಗೆ ಅವರನ್ನು ಕಾಣಲು ಮುಂಡಾಜೆಯ ಅವರ ಅತ್ಮೀಯ ಸ್ನೇಹಿತರು ಹೋಗಿದ್ದ ವೇಳೆಯಲ್ಲೂ ಅವರು ಅವರನ್ನು ಗುರುತಿಸಲು ಅಸಾಧ್ಯವಾಗಿದ್ದರು.

ಹೀಗಿರುವಂತೆ ಇತ್ತೀಚೆಗೆ ಅವರು ತನ್ನ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡು ತಮ್ಮ ಮನೆಯ ಸಮೀಪವೇ ಇರುವ ರೈಲುಹಳಿಯ ಕಡೆಗೆ ನಡೆದುಕೊಂಡು ಹೋಗಿದ್ದರು. ಇದನ್ನು ಒಂದು ಗಳಿಗೆ ಮನೆಯವರು ಗಮನಿಸಿರಲಿಲ್ಲ. ಅವರು ಆಚೆ ಹೋಗಿರುವ ಬಗ್ಗೆ ಮನೆಯವರಿಗೆ ಅರಿವಿಗೆ ಬರುವ ಮುನ್ನವೇ ಅಲ್ಲಿ ಅವರಿಗೆ ಅಪಘಾತವಾಗಿದ್ದು ಕೊನೆಯುಸಿರೆಳೆದಿದ್ದರು. 

ಅವರ ಅಂತ್ಯಸಂಸ್ಕಾರ ವಿಧಿಗಳು ಹೊಸಂಗಡಿಯಲ್ಲೇ ನೆರವೇರಿಸಲಾಗಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment