ನಿಡಿಗಲ್ ಆದರ್ಶನಗರ 5 ಸೆಂಟ್ಸ್ ಮನೆ
ಬೆಳ್ತಂಗಡಿ: ತಾಲೂಕಿನಲ್ಲಿ ಶುಕ್ರವಾರ ವಿಪರೀತ ಮಳೆಯಾಗುತ್ತಿದ್ದು ಧರೆ ಕುಸಿತ, ವಿದ್ಯುತ್ ಕಂಬಗಳು ನೆಲಕ್ಕುರಳಿರುವುದೂ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳಿಗೆ ನಷ್ಟ ಸಂಭವಿಸಿದೆ.
ಚಾರ್ಮಾಡಿ ಗ್ರಾಮದ ಅಬ್ಸಾ ಅವರ ಮನೆಮುಂಡಾಜೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಭಿಡೆ ಕ್ರಾಸ್ ಎಂಬಲ್ಲಿ ಶಕುಂತಲಾ ಮೆಹಂದಳೆ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮಳೆ ನೀರು ಮನೆಯ ಹಿಂಭಾಗದ ಜಗಲಿಯನ್ನು ಆವರಿಸಿದೆ. ಮಲವಂತಿಗೆ ಗ್ರಾಮದ ಪರಾರಿಗುಡ್ಡೆ ಸುಂದರ ಪೂಜಾರಿ ಅವರ ಮನೆಗೆ ಪಕ್ಕದ ಗುಡ್ಡ ಕುಸಿತವಾಗಿ ಮಣ್ಣು ಗೋಡೆ ಮೇಳೆ ಆವರಿಸಿ ಅಪಾಯ ಎದುರಾಗಿದೆ. ಮನೆಯವರು ಪಕ್ಕದ ಮನೆಯಲ್ಲಿ ಆಶ್ರಯಪಡೆದಿದ್ದಾರೆ. ವೇಣೂರು ಪರಿಸರದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಜೋರಾಗಿ ಬಿದ್ದಿದೆ. ಲಾಯಿಲ ಗ್ರಾಮದ ಕೊಳೆಚ್ಚಾವು ಎಂಬಲ್ಲಿ ರಾಧಾ ಎಂಬವರ ಮನೆಯ ಹಿಂದುಗಡೆ ಗುಡ್ಡ ಕುಸಿಯುವ ಸಂಭವ ಎದುರಾಗಿದ್ದು ಮನೆಯವರನ್ನು ಸ್ಥಳಾಂತರಿಸಲಾಗಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಾಪು ಎಂಬಲ್ಲಿ ಮರದ ರೆಂಬೆಯ ಒಂದು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಉಜಿರೆಯ ಶಿವಾಜಿನಗರ ಸಮೀಪ ಭಾಸ್ಕರ ಎಂಬವರ ಮನೆ ಪಕ್ಕದ ಗುಡ್ಡ ಕುಸಿತವಾಗಿದ್ದು ಮಣ್ಣು ಮನೆಯ ಗೋಡೆಯನ್ನು ಆವರಿಸಿದೆ.
ದಿಡುಪೆಯಲ್ಲಿ ಭೂ ಕುಸಿತಉಜಿರೆ ಶಿವಾಜಿನಗರ
ಲಾಯಿಲ ಗ್ರಾಮದ ಕೊಳೆಚ್ಚಾವು ರಾಧಾ ಅವರ ಮನೆ
ಮುಂಡಾಜೆ ಕಾಪು ಬಳಿ
ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಲಘುಪ್ರಮಾಣದಲ್ಲಿ ಮಣ್ಣು ಕುಸಿತಮತ್ತೆ ಮಳೆ ವಿಪರೀತವಾಗಿ ಮುಂದುವರಿದಿದೆ. ಸಂಜೆ ವೇಳೆ ಭಾರೀ ಗಾಳಿ ಬೀಸಿದುದರ ಪರಿಣಾಮ 24 ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಉಜಿರೆ ಸಬ್ಸ್ಟೇಷನ್ ವ್ಯಾಪ್ತಿಯಲ್ಲಿ60 ಗಂಟೆಗಳಿಂದ ವಿದ್ಯುತ್ ಕೈ ಕೊಟ್ಟಿದ್ದು ಎಲ್ಲ ಮನೆಗಳಲ್ಲೂ ಇನ್ವರ್ಟರ್ ಬ್ಯಾಟರಿ ಖಾಲಿಯಾಗಿ ಜನ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಒಟ್ಟಾರೆಯಾಗಿ ತಾಲೂಕಿನಲ್ಲಿ ಆಹುತ್ತಿರುವ ಅತಿವೃಷ್ಟಿ ಅಪಾಯದ ಮುನ್ಸೂಚನೆ ನೀಡಿದೆ.