Posts

ಗಂಡಿಬಾಗಿಲು ಸೈಂಟ್ ಥೋಮಸ್ ದೇವಾಲಯ- ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಗಂಡಿಬಾಗಿಲು ಸಂತ ಥೋಮಸರ ದೇವಾಲಯದ ವಿನ್ಸೆಂಟ್ ಡಿ ಪೌಲ್ ಸೊಸೈಟಿ ನೇತೃತ್ವದಲ್ಲಿ  ನೆರಿಯ, ಗಂಡಿಬಾಗಿಲು ಪ್ರದೇಶದ ಆಯ್ದ  ಕೋವಿಡ್ ಬಾಧಿತ ಹಾಗೂ ಇತರೆ ಬಡ ಕುಟುಂಬಗಳಿಗೆ  ಸುಮಾರು 30 ಸಾವಿರ ರೂಪಾಯಿ ಮೌಲ್ಯದ ದಿನಸಿ ವಸ್ತುಗಳನ್ನು ಒಳಗೊಂಡ ಆಹಾರದ ಕಿಟ್ ನ್ನು ದಿನಾಂಕ 1.6.21ರಂದು ವಿತರಿಸಲಾಯಿತು.

ಧರ್ಮಗುರುಗಳಾದ ವಂ.ಫಾ. ಷಾಜಿ ಮಾತ್ಯು, ವಿನ್ಸೆಂಟ್ ಡಿ ಪೌಲ್ ಸೊಸೈಟಿಯ ಅಧ್ಯಕ್ಷ ಚಾಂಡಿ ಸಿ ವಿ, ಸದಸ್ಯರಾದ ಷಾಜಿ ಎಂ ಟಿ, ಜೋಸ್ ಕೆ ಜೆ, ವರ್ಗಿಸ್ ಎಂ ಜೆ, ಮೈಕೆಲ್ ಓ .ಜೆ, ಪಿ. ಜೆ ಜೋಣಿ, ಜೋಸೆಫ್ ಪಿ ಪಿ, ಅಲೀಸ್ ಷಾಜಿ ಮೊದಲಾದವರು ಬಾಗವಹಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official