ಬೆಳ್ತಂಗಡಿ; ದಾರಿಯಲ್ಲಿ ಬಿದ್ದು ಸಿಕ್ಕಿದ 5 ಸಾವಿರಕ್ಕೂ ಹೆಚ್ಚು ನಗದು ಇದ್ದ ಪರ್ಸನ್ನು ಕಳೆದುಕೊಂಡವರಿಗೆ ಮರಳಿಸಿದ ಶಾಲಾ ಬಾಲಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಂದಾರು ನಿವಾಸಿ, ಹೈಸ್ಕೂಲ್ ವಿದ್ಯಾರ್ಥಿ ಜುನೈದ್ ಎಂಬವರಿಗೆ ಎರಡು ದಿನಗಳ ಹಿಂದೆ ದಾರಿಯಲ್ಲಿ 5 ಸಾವಿರ ಕಿಂತಲೂ ಹೆಚ್ಚು ಹಣ ಇರುವ ಪರ್ಸ್ ಸಿಕ್ಕಿತ್ತು. ವಾರಸುದಾರರು ಹುಡುಕುವ ಸಮಯ ವಿಚಾರ ಅರಿತ ವಿದ್ಯಾರ್ಥಿ ಅದು ತನಗೆ ಸಿಕ್ಕಿದೆ ಎಂದು ಒಪ್ಪಿಕೊಂಡು ಅದನ್ನು ವಾರಿಸುದಾರರಿಗೆ ಹಿಂತಿರುಗಿಸಿದ್ದಾನೆ.
ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿ ಬಾಲಕನ ಪ್ರಾಮಾಣಿಕತೆ ಮೆಚ್ಚಿ ನಗದು ಬಹುಮಾನ ನೀಡಿ ಪುರಸ್ಕರಿಸಿದ್ದಾರೆ.