Posts

ಹಿಂದೂ ಸಂಘಟನೆಯ ಪ್ರತಿಭಟನೆಯಲ್ಲಿ ಇಸ್ಲಾಂ ಧರ್ಮನಿಂದನೆ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಪೊಲೀಸ್ ದೂರು

1 min read

ಬೆಳ್ತಂಗಡಿ: ಇಲ್ಲಿನ  ಪೋಲಿಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ಬಸ್ಸು ನಿಲ್ದಾಣದ ಬಳಿಯಲ್ಲಿ ಜೂ.30 ರಂದು ಬೆಳ್ತಂಗಡಿ ಪ್ರಖಂಡದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಹಮ್ಮಿಕೊಂಡಿದ್ದ ರಾಜಸ್ಥಾನದ ಉದಯಪುರ ದಲ್ಲ ಕನ್ನಯ್ಯಲಾಲ್ ಹತ್ಯೆ ಖಂಡಿಸಿ ಆಯೋಜಿಸಿದ್ದ ಪ್ರತಿಭಟಣಾ ಸಭೆಯಲ್ಲಿ 

 ಇಸ್ಲಾಮ್ ಧರ್ಮವನ್ನು ವಾಚಾಮಗೋಚರ ನಿಂದಿಸಲಾಗಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಪೊಲೀಸರಿಗೆ ದೂರು ನೀಡಿದೆ. 
ಪ್ರತಿಭಟನಾ ಭಾಷಣದುದ್ದಕ್ಕೂ ಇಸ್ಲಾಂ ಧರ್ಮದ ಬಗ್ಗೆ,  ಮದರಸದ ಬಗ್ಗೆ, ಪ್ರವಾದಿಯವರ ಬಗ್ಗೆ ತೀರಾ ಕೆಟ್ಟದಾಗಿ, ಪ್ರಚೋದನಾಕಾರಿಯಾಗಿ, ಜನರ ಧಾರ್ಮಿಕ ನಂಬಿಕೆ ದಕ್ಕೆ ತರುವಂತಹ ರೀತಿಯಲ್ಲಿ ಮಾತನಾಡಲಾಗಿದೆ. ಇದು ಕೋಮಗಲಭೆಗೆ ಪ್ರಚೋದನೆ ನೀಡುವಂತಹದ್ದು. ಇದರಿಂದ ಇಸ್ಲಾಂ ಧರ್ಮದ ಅನುಯಾಯಿಗಳಾದ ನಮಗೆ ಬೆದರಿಕೆಯನ್ನು ಒಡ್ಡಿ ,ಕೋಮು ಸಾಮರಸ್ಯಕ್ಕೆ ದಕ್ಕೆ ತರುವಂತಹ ಹೇಳಿಕೆಯನ್ನು ಬಹಿರಂಗವಾಗಿ ನೀಡಲಾಗಿದೆ. ಕನ್ನಯ್ಯಲಾಲ್ ರವರ ಹತ್ಯೆಯ ಪ್ರತೀಕಾರವನ್ನು ತೀರಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿಲಾಗಿದ್ದು ಇದು ಜೀವಬೆದರಿಕೆಯೂ ಆಗಿರುತ್ತದೆ.  
ಆದುದರಿಂದ ಈ ಸಭೆಯಲ್ಲಿ ಭಾಷಣ ಮಾಡಿದ ಮತ್ತು ಕುಮ್ಮಕ್ಕು ನೀಡಿದ ದಿನಕರ ಆದೇಲು, ನವೀನ್ ನೆರಿಯ ಮತ್ತಿತರ ಆರೋಪಿತರುಗಳ ವಿರುದ್ಧ ಭಾರತ ದಂಡ ಸಂಹಿತೆ ಕಠಿಣ ಕಾಯ್ದೆಗಳ ಕಲಂನಡಿಯಲ್ಲಿ ಪ್ರಕರಣ ದಾಖಲಿಸುವಂತೆ ಇತ್ತಾಯಿಸಲಾಗಿದೆ.  
ನಿಯೋಗದ ಜೊತೆ ಕೆ.ಪಿ.ಸಿ.ಸಿ.ಕಾರ್ಮಿಕ  ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧಕ್ಷರಾದ ಖಾಲಿದ್  ಕಕ್ಯಾನ, ವಿನ್ಸೆಂಟ್ ಡಿಸೋಜ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಕರೀಮ್' ಅಲ್ಪಸಂಖ್ಯಾತ ನಗರ ಘಟಕ ಬೆಳ್ತಂಗಡಿ ಸಂಘಟನೆ ಕಾರ್ಯದರ್ಶಿ ರಮೀಝ್ ರಾಝ, ರಫೀಕ್ ಲಾಯ್ಲ ಹಾಗೂ ಯುವ ಕಾಂಗ್ರೆಸ್ ಬೆಳ್ತಂಗಡಿ  ಪ್ರಧಾನ ಕಾರ್ಯದರ್ಶಿ ಆರೀಫ್ ಕಕ್ಯಾನ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment