ಬೆಳ್ತಂಗಡಿ : ಮೇಲಂತಬೆಟ್ಟು ಗ್ರಾಮದ ನೂಜೋಡಿ ನಿವಾಸಿ ಡಾ. ಸೋಹನ್ ಕುಮಾರ್ ಅವರ ಪುತ್ರಿ ಕು. ಅಕ್ಷತಾ (20ವ) ಅಸೌಖ್ಯದಿಂದಿದ್ದವರು ಜು.15 ರಂದು ಬೆಳಿಗ್ಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಎಂಟು ವರ್ಷಗಳಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದ ಅಕ್ಷತಾರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ಯಿತ್ತು. ಅದಾಗ್ಯೂ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಮೃತರು ತಂದೆ, ಕಾಪು ಬೆಳಪು ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೋಹನ್ ಕುಮಾರ್ ನೂಜೋಡಿ, ತಾಯಿ ಪೂರ್ಣಿಮಾ ಸೋಹನ್, ಸಹೋದರ ಇಶಾನ್ ಎಸ್.ಎನ್, ಅಜ್ಜ-ಅಜ್ಜಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.