Posts

ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಈಸ್ಟ್ ವಾರ್ಷಿಕ ಅವಲೋಕನ ಸಭೆ

1 min read

 

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಈಸ್ಟ್ ಇದರ ವಾರ್ಷಿಕ ಅವಲೋಕನ ಸಭೆ ಅಧ್ಯಕ್ಷರಾದ ಇಬ್ರಾಹಿಂ ಅಮ್ಜದಿ ಯವರ ಅಧ್ಯಕ್ಷತೆಯಲ್ಲಿ ಫೆ. 25 ರಂದು ದಾರನ್ನಾಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ಕೊಡುಂಗಾಯಿ ವಿಟ್ಲದಲ್ಲಿ ನಡೆಯಿತು.

SYS ನಾಯಕ ಸಲೀಂ ಹಾಜಿ ಬೈರಿಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು.ಪ್ರ.ಕಾರ್ಯದರ್ಶಿ ಮುಹಮ್ಮದ್ ಅಲೀ ತುರ್ಕಲಿಕೆ ಸೇರಿದಂತೆ ವಿವಿಧ ವಿಭಾಗವಾರ ವರದಿಯನ್ನು ಅಯಾಯ ವಿಭಾಗದ ಕಾರ್ಯದರ್ಶಿಗಳು ಮಂಡಿಸಿದರು. ಕೋಶಾಧಿಕಾರಿ ಶರೀಫ್ ಬೆರ್ಕಳ ಲೆಕ್ಕಪತ್ರ ಮಂಡಿಸಿದರು.ಎಸ್ ವೈ ಎಸ್  ನಾಯಕ ಜಿ ಎಮ್ ಕಾಮಿಲ್ ಸಖಾಫಿ  ಸಾಂಘಿಕ ತರಗತಿ ನಡೆಸಿದರು. ಎಸ್ಸೆಸ್ಸೆಪ್ ರಾಜ್ಯ ವಿಸ್ಡಂ ಕಾರ್ಯದರ್ಶಿ ರಹೀಂ ಹೊಸ್ಮಾರ್ ವೀಕ್ಷಕರಾಗಿದ್ದರು.

ನೂತನ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಅಮ್ಜದಿ, ಪ್ರ.ಕಾರ್ಯದರ್ಶಿಯಾಗಿ ಶಫೀಕ್ ಮಾಸ್ಟರ್ ಪುತ್ತೂರು, ಕೋಶಾಧಿಕಾರಿಯಾಗಿ ಸಿದ್ದೀಕ್ ಸುಳ್ಯ, ಕಾರ್ಯದರ್ಶಿಗಳಾಗಿ ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲ್ ,ರಶೀದ್ ಮಡಂತ್ಯಾರ್, ರಝಾಕ್ ಸ‌ಅ‌ದಿ, ಶರೀಪ್ ನಾವೂರು, ಮಸ್ಹೂದ್ ಸ‌ಅ‌ದಿ, ಪೈಝಲ್ ಝುಹ್ರಿ ಸುಳ್ಯ, ಅಶ್ಫಾಖ್ ಕೊಡುಂಗಾಯಿ, ಮಸ್ತಫಾ ಉರುವಾಲುಪದವು, ಹಾಗೂ 14 ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆಮಾಡಲಾಯಿತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment