ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಐ.ಜೆ ಕಾಂಪ್ಲೆಕ್ಸ್ ನಲ್ಲಿ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಮತ್ತು ಅಲಂಕಾರಿಕಾ ವಸ್ತುಗಳು, ಗಿಫ್ಟ್ ವಸ್ತುಗಳ ಪ್ರತ್ಯೇಕ ಮಾರಾಟ ಮಳಿಗೆ ಪ್ರಭು ಜ್ಯುವೆಲ್ಲರ್ಸ್ ರವಿವಾರ ಉದ್ಘಾಟನೆ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ದೀಪ ಪಜ್ವಲನಗೊಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಶೆಟ್ಟಿ, ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಾ ಬಂಗೇರ, ಮಹಿಳಾ ಬಿಲ್ಲವ ವೇದಿಕೆ ಉಪಾಧ್ಯಕ್ಷೆ ಕೇಶವತಿ, ಬೆಳ್ತಂಗಡಿ ವರ್ತಕರ ಸಂಘದ ಉಪಾಧ್ಯಕ್ಷ ಹಾರಿಸ್, ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಅಜೇಯ ಮೊದಲಾದ ಗಣ್ಯರು ಭಾಗಿಯಾಗಿದ್ದರು.
ಆಹ್ವಾನಿತ ಗಣ್ಯರನ್ನು ಪ್ರಭು ಜ್ಯುವೆಲ್ಲರ್ಸ್ ಮಾಲಿಕರಾದ ಉಮಾನಾಥ ಪ್ರಭು ಮತ್ತು ಹರಿಪ್ರಸಾದ್ ಪ್ರಭು ಬರಮಾಡಿಕೊಂಡು ಗೌರವಿಸಿದರು.
ವಿಜಯಕುಮಾರ್ ಅಳದಂಗಡಿ ಕಾರ್ಯಕ್ರಮ ನಿರೂಪಿಸಿದರು.