ಬೆಳ್ತಂಗಡಿ; ಸರಳ ವಿವಾಹವನ್ನು ಪ್ರವಾದಿ ಪೈಗಂಬರರು ಪ್ರೋತ್ಸಾಹಿಸಿದ್ದರು. ಅದರಿಂದ ಪ್ರೇರಣೆ ಪಡೆವ ನಾವು ನಮ್ಮ ಮದುವೆಗಳ ಆಧುನಿಕ ಆಡಂಬರದ ಶೈಲಿಯನ್ನು ಸರಳೀಕರಿಸಲು ಸಾಧ್ಯವಾಗಬೇಕು. ಆ ನಿಟ್ಟಿನಲ್ಲಿ ಎಸ್ವೈಎಸ್ ವತಿಯಿಂದ ರಾಜ್ಯಾದ್ಯಂತ "ಮುಸ್ಲಿಂ ಮದುವೆ ಹೇಗಿರಬೇಕು" ಎಂಬ ಜಾಗೃತಿ ಅಭಿಯಾನ ಕೈಗೊಳ್ಳುವ ಚಿಂತನೆ ಇದೆ ಎಂದು ಎಸ್ವೈಎಸ್ ರಾಜ್ಯಾಧ್ಯಕ್ಷ ಡಾ.ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಹೇಳಿದರು.
ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ರಿಫಾಯಿಯಾ ದಪ್ಪ್ ಸಮಿತಿ ವತಿಯಿಂದ ದಾನಿಗಳ ಸಹಕಾರದೊಂದಿಗೆ ಫೆ.19 ರಂದು ನಡೆದ 5 ಜೊತೆ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ಕಾಜೂರಿನ ಜಮಾಅತ್ ಮತ್ತು ಆರ್ಡಿಸಿ ಕಮಿಟಿ ನೇತೃತ್ವದಲ್ಲಿ ಸರಳೀಕೃತ ವಿವಾಹಕ್ಕೆ ಪ್ರೋತ್ಸಾಹ ಮತ್ತು ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮ ದಪ್ಫ್ ಅನ್ನು ಪ್ರೋತ್ಸಾಹಿಸಿದ ಈ ಕಾರ್ಯ ಅಭಿನಂದನಾರ್ಹ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.
ಮದುವೆಗೆ ನೇತೃತ್ವ ನೀಡಿದ ಸಯ್ಯಿದ್ ಕಾಜೂರು ತಂಙಳ್ ಮಾತನಾಡಿ, ದಾಂಪತ್ಯ ಜೀವನದಲ್ಲಿ ಪತಿ ಪತ್ನಿ ನಡುವೆ ಯಾವುದೇ ರೀತಿಯಿಂದಲೂ ಪೀಡನೆಗೆ ಅವಕಾಶವಿಲ್ಲ. ಅಂತಹಾ ವಾಗ್ದಾನ ಮಾಡಿದ ಬಳಿಕವೇ ವಿವಾಹ ವಿಧಿ ನೆರವೇರುವುದು ಇಸ್ಲಾಂ ನಲ್ಲಿ ಮಾತ್ರ ಎಂದರು. ಸಯ್ಯಿದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಸಖಾಫಿ ಮಾತನಾಡಿ, ಅಲ್ಲಾಹನು ನೀಡಿದ ಅಂಪತ್ತನ್ನು ಅವನ ಮಾರ್ಗದಲ್ಲಿ ವ್ಯಯಿಸಿದರೆ ಅದಕ್ಕೆ ಪ್ರತಿಫಲ ಖಂಡಿತಾ. ಮುಸ್ಲಿಂ ಸಮುದಾಯ ಮದುವೆ ಹೆಸರಿನಲ್ಲಿ ಎಂದೂ ಯಾಚಿಸುವಂತಹಾ ಸ್ಥಿತಿ ಬರಬಾರದು. ಅದಕ್ಕಾಗಿ ಈ ಸಾಮೂಹಿಕ ವಿವಾಹ ಎಂದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲೆತೀಫ್ ಸಅದಿ ಶಿವಮೊಗ್ಗ ಕಾರ್ಯಕ್ರಮ ಉದ್ಘಾಟಿಸಿದರು.
ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಝುಲ್ಫಿಕರ್ ಶುಭ ಕೋರಿದರು.
ವೇದಿಕೆಯಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಜಾಬಿರ್ ತಂಙಳ್ ಆಲ್ದೂರು, ಕರ್ನಾಟಕ ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಸಯ್ಯಿದ್ ಎಸ್.ಎಂ ತಂಙಳ್, ಸಯ್ಯಿದ್ ಸಿಮಾಕ್ ಜಮಲುಲ್ಲೈಲಿ ತಂಙಳ್, ಗಣ್ಯರಾದ ಉಜಿರೆ ಮಸ್ಜಿದ್ ಅಧ್ಯಕ್ಷ ಹಾಜಿ ಬಿ.ಎಮ್ ಹಮೀದ್, ರಫೀಕ್ ಮುಗುಳಿ, ಕರಾವಳಿ ಅಬ್ದುಲ್ ಅಝೀಝ್ ಹಾಜಿ, ಡಿ.ಎ ಉಸ್ಮಾನ್ ಹಾಜಿ ತೋಡಾರ್, ಯು.ಕೆ ಅಬ್ದುಲ್ ಶುಕೂರ್ ಉಜಿರೆ, ಅಬ್ದುಲ್ ರಹಿಮಾನ್ ಗುಂಡೀರು, ಮದರ್ ಇಂಡಿಯಾ ಅಬ್ದುಲ್ ರಝಾಕ್, ಎಂ.ಕೆ ಉಮರಬ್ಬ, ಜಿ.ಅಶ್ರಫ್ ತೋಡಾರ್, ಅಬ್ದುಲ್ ಸಲಾಂ, ಬಿ.ಎಂ.ಎ ಅಬ್ದುಲ್ ರಝಾಕ್ ಹಾಜಿ ಮುಂಡಾಜೆ, ಸೈಝಲ್, ವಝೀರ್ ಬಂಗಾಡಿ, ದಾವೂದ್ ಉಮರಬ್ಬ, ನಾಸಿರ್ ಗೂಡಿನಬಳಿ, ಅಬ್ದುಲ್ ಖಾದರ್ ಮೂಸಾ ಹಾಜಿ ಬೇಕೂರು, ಮುಹಮ್ಮದ್ ಕಿಲ್ಲೂರು, ಉರೂಸ್ ಸಮಿತಿ ಉಪಾಧ್ಯಕ್ಷ ಬಿ.ಹೆಚ್ ಅಬೂಬಕ್ಕರ್ ಹಾಜಿ, ಕೋಶಾಧಿಕಾರಿ ಕಮಾಲ್, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಕಾಜೂರು ಮಾಜಿ ಅಧ್ಯಕ್ಷರಾದ ಉಮರ್ ಸಖಾಫಿ,ಮುಹಮ್ಮದ್ ಸಖಾಫಿ, ಕೆ ಶೇಖಬ್ಬ ಮತ್ತು ಇಬ್ರಾಹಿಂ ಮದನಿ, ಆರ್ಡಿಸಿ ಸಲಹೆಗಾರ ಜೆ ಹೆಚ್ ಅಬ್ಬಾಸ್, ಪ್ರಸ್ತುತ ಅಧ್ಯಕ್ಷ ಮುಹಮ್ಮದ್ ಶರೀಫ್, ಕಾರ್ಯದರ್ಶಿ ಉಮರುಲ್ ಅಶ್ಪಾಕ್, ಕೋಶಾಧಿಕಾರಿ ಮುಸ್ತಫಾ, ಉಪಾಧ್ಯಕ್ಷ ಸಲೀಂ, ಗ್ರಾ.ಪಂ ಸದಸ್ಯರಾದ ಕೆ.ಯು ಮುಹಮ್ಮದ್, ಶಾಹುಲ್ ಹಮೀದ್ ಮತ್ತು ಅಹ್ಮದ್ ಕಬೀರ್ ಉಪಸ್ಥಿತರಿದ್ದರು.
ಕಿಲ್ಲೂರು ಮಸ್ಜಿದ್ ಖತೀಬ್ ರಫೀಕ್ ಸಅದಿ ಮದುವೆ "ಖುತುಬಾ" ಪಾರಾಯಣಗೈದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಕಾರ್ಯಕ್ರಮ ನಿರೂಪಿಸಿದರು. ಉರೂಸ್ ಸಮಿತಿ ಪ್ರ. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.
ವಿವಾಹ ಸಮಾರಂಭದಲ್ಲಿ ಐವರು ವಧುವರರಾದ ಬಶೀರ್ ಕೊಡಿಂಬಾಳ - ಸ್ವಾಲಿಯತ್ ಜಸೀರಾ, ಖಲಂದರ್ ಬಿಳಿಯೂರು-ಕೆ.ಎಮ್ ರಮೀಝಾ ಭಾನು, ರಾಷಿದ್ ಕಿಲ್ಲೂರು -ಸಂಶಾದ್, ಅಬ್ದುಲ್ ಸಮದ್- ಫಾತಿಮತ್ ನಾಫಿಅ ಮತ್ತು ಮುಹಮ್ಮದ್ ಹರ್ಷದ್- ಆಯಿಷತುಲ್ ರಾಫಿಯ ಇವರು ದಾಂಪತ್ಯ ಜೀವನಕೆ ಕಾಲಿರಿಸಿದರು.
ವಧು ವರರಿಗೆ ಆರ್ಡಿಸಿ ವತಿಯಿಂದ ದಾನಿಗಳ ಸಹಕಾರದೊಂದಿಗೆ ತಲಾ 4 ಪವನ್ ಚಿನ್ನಾಭರಣ, ಮದುವೆಗೆ ಸಂಬಂಧಿಸಿದ ವಸ್ರ್ರ, ಮಧುಮಗನಿಗೆ ವಾಚ್, ವಿವಾಹಮಾಲೆ, ವಧುವಿಗೆ ನಮಾಝ್ ವಸ್ರ್ತ, ಪವಿತ್ರ ಖುರ್ಆನ್ ಇವುಗಳನ್ನು ನೀಡಲಾಯಿತು. ಮದುವೆ ಮನೆಯವರ ಕುಟುಂಬಸ್ತರೂ ಸೇರಿ 6 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಮ್ಯಾಟ್:
ಬಳಿಕ ನಡೆದ ರಾಜ್ಯಮಟ್ಟದ ದಫ್ಫ್ ಸ್ಪರ್ಧೆಯಲ್ಲಿ ರಾಜ್ಯದ ಆಹ್ವಾನಿತ 14 ತಂಡಗಳು ಭಾಗವಹಿಸಿದ್ದು ಮನೋಜ್ಞವಾದ ದಫ್ಫ್ ಪ್ರದರ್ಶನ ನಡೆಯಿತು. ರಾಜ್ಯ ದಫ್ಫ್ ಕಮಿಟಿ ಅಧ್ಯಕ್ಷ, ದಫ್ಫ್ ತರಬೇತುದಾರ ಇಸ್ಮಾಯಿಲ್ ಅವರು ವೀಕ್ಷಕ ವಿವರಣೆ ನೀಡಿದರು.
ಚಿತ್ರ; ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲೆತೀಫ್ ಸಅದಿ ಶಿವಮೊಗ್ಗ ಕಾರ್ಯಕ್ರಮ ಉದ್ಘಾಟಿಸುತ್ತಿರುವುದು