ಬೆಳ್ತಂಗಡಿ: ಬಿಸಿ ನೀರು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ನಾಲ್ಕು ವರ್ಷದ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ಮುನೀರ್ ರವರ ಪುತ್ರಿ ಫಾತಿಮತ್ ಸಲಹಾ (4ವ.) ಅವರೇ ದಾರುಣವಾಗಿ ಮೃತಪಟ್ಟ ಮಗು.
ವಿಟ್ಲ ಸಮೀಪದ ಕೆಲಿಂಜ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ರವರ ಮಗಳ ಪುತ್ರಿಯಾಗಿರುವ ಪಾತಿಮಾತ್ ಸಹಲ ಳಿಗೆ ಕೆಲವು ದಿನಗಳ ಹಿಂದೆ ಆಕಸ್ಮಿಕವಾಗಿ ಬಿಸಿ ನೀರು ಮೈಗೆ ಬಿದ್ದು ಗಂಭೀರ ಸ್ವರೂಪದ ಬೆಂದ ಗಾಯಗಳಾಗಿತ್ತು. ಆ ಬಳಿಕದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಜೀವನ್ಮರಣ ಹೋರಾಟ ನಡೆಸಿ, ಶನಿವಾರ ಕೊನೆಯುಸಿರೆಳೆದಿದೆ.