Posts

ಫೆ.19; ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೆ ಪ್ರಯುಕ್ತ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 12 ನೇ ವರ್ಷದ ಸಾಂಸ್ಕೃತಿಕ ಉತ್ಸವ

1 min read

ಬೆಳ್ತಂಗಡಿ: ಕಳೆದ 12 ವರ್ಷಗಳಿಂದ ಬೆಳ್ತಂಗಡಿ ನಗರ ಕೇಂದ್ರಿತವಾಗಿ ಸಾಂಸ್ಕೃತಿಕ ಉತ್ಸವಗಳು, ಜಾನಪದ ಸಂಸ್ಕೃತಿಯ ಪ್ರಚಾರ, ಕಲಾವಿದರಿಗೆ ಪ್ರೋತ್ಸಾಹ, ಪ್ರಶಸ್ತಿಗಳ ಆಯೋಜನೆ, ಇತ್ಯಾಧಿಯಾಗಿ ಕಲಾವಿದರ ಪೋಷಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ, ಯುವ ಸಂಘಟಕ ಸಂಪತ್ ಸುವರ್ಣ ಅವರ ನೇತೃತ್ವದ ಸುವರ್ಣ ಸಾಂಸಕೃತಿಕ ಪ್ರತಿಷ್ಠಾನ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೆ ಪ್ರಯುಕ್ತ ಫೆ.19 ರಂದು ವಿಶೇಷ ಸಾಂಸ್ಕೃತಿಕ ಉತ್ಸವ  ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಾರಿಯ ಬೆಳ್ತಂಗಡಿ ಕುತ್ಯಾರು ಜಾತ್ರಾ ಮಹೋತ್ಸವದ ಅಂಗವಾಗಿ ಪರಮ ಪದ್ಮ ಕಲಾವಿದರು ಇವರಿಂದ ಸಂಜೆ 7.30 ಕ್ಕೆ, ಚಲನಚಿತ್ರ ನಟ ಚೇತನ್ ರೈ ಮಾಣಿ ಅಭಿನಯದ ಬಿರ್ಸೆ ಅನಿಲ್ ಕುಮಾರ್ ಸಸಿಹಿತ್ಲು ಮತ್ತು ಇತರ ಪ್ರಬುದ್ಧ ಕಲಾವಿದರ ಸಮಾಗಮದಲ್ಲಿ ಬಿ.ಕೆ ಪದ್ಮರಾಜ ಎಕ್ಕಾರು ಮಾಲೀಕತ್ವದಲ್ಲಿ ಶಿವ ಪುರ್ಸಾದ ಬಬ್ಬರ್ಯೆ ನಾಟಕ ಪ್ರದರ್ಶನ ನಡೆಯಲಿದೆ. ಇದಕ್ಕೂ ಮುನ್ನ ಸಂಜೆ 6.00 ಗಂಟೆಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಡೇಸೆಲ್ ಸ್ಟುಡಿಯೋ ಮುಲ್ಕಿ ಇವರ ವತಿಯಿಂದ ಜಾನಪದ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮಗಳಿಗೆ ವಿಶೇಷ ಆಧ್ಯತೆ ನೀಡದೆ ಸಾಂಸ್ಕೃತಿಕ ರಸದೌತಣ ನೀಡಲು ತೀರ್ಮಾನಿಸಲಾಗಿದ್ದು ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬರುವಂತೆ ಸಕಲ‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment