Posts

ಚೈತನ್ಯ ಅಕಾಡಮಿಯಿಂದ ಮುಂಡಾಜೆಯ ಯುವ ಕಲಾವಿದ ನಾರಾಯಣ ಶೆಟ್ಟಿ ಅವರಿಗೆ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ

1 min read



ಬೆಳ್ತಂಗಡಿ; ಕರಾವಳಿಯ ಗಂಡುಕಲೆ ಯಕ್ಷಗಾನ ಕ್ಷೇತ್ರದ 20 ಕ್ಕೂ ಅಧಿಕ ಮಂದಿ ಭಾಗವತರ ಸ್ವರಾಭಿನಯ ಮಾಡುವ ಮೂಲಕ ವಿಶಿಷ್ಟಪೂರ್ಣ 'ಯಕ್ಷ ಮಿಮಿಕ್ರಿ' ಕಲಾವಿದನೆಮನದು  ಮುಂಡಾಜೆಯ ನಾರಾಯಣ ಶೆಟ್ಟಿ ಅವರಿಗೆ ಬೆಂಗಳೂರಿನ ಚೈತನ್ಯ ಅಕಾಡಮಿಯಿಂದ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ ಲಭಿಸಿದೆ.

ಕೀರ್ತನಾ ಕಲಾ ತಂಡ ಮುಂಡಾಜೆ ಇದರ ಮಾಜಿ ಅಧ್ಯಕ್ಷರಾಗಿರುವ ನಾರಾಯಣ ಶೆಟ್ಟಿ ಅವರು ಬಹುವಿಧ ಕಲಾಕ್ಷೇತ್ರದಲ್ಲಿ ಈಗಾಗಲೇ ಛಾಪು ಮೂಡಿಸಿದ್ದಾರೆ. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮತ್ತು ಯುವಕ ಮಂಡಲ ಮುಂಡಾಜೆ ಇದರ ಮೂಲಕ ಯುವಜನಮೇಳಗಳಲ್ಲಿ ಭಾಗವಹಿಸಿ ಗೀಗೀ ಪದ, ಲಾವಣಿ, ರಂಗಗೀತೆ ಇತ್ಯಾಧಿ ಜಾನಪದ ಪ್ರಕಾರಗಳಲ್ಲೂ ಹಲವು ಬಹುಮಾನಗಳನ್ನು ಗೆದ್ದಿದ್ದಾರೆ.
'ಯಕ್ಷಮಿಮಿಕ್ರಿ' ವಿಭಾಗದಲ್ಲಿ ಅವರು ಈಗಾಗಲೇ ಮುಂಬೈ, ಕೇರಳ ರಾಜ್ಯಗಳಲ್ಲೂ ಕಾರ್ಯಕ್ರಮ ಸಾದರಪಡಿಸಿ ಹೆಮ್ಮೆ ಗಳಿಸಿದ್ದಾರೆ. ರೂಪಕಗಳಂತಹಾ
ಕಾರ್ಯಕ್ರಮಗಳಲ್ಲಿ ಅವರು ನಿರಂತರ 3 ಗಂಟೆಗಳ ಕಾಲ ಬಹುರಾಗಗಳಲ್ಲಿ ಹಾಡಬಲ್ಲ ಸಾಮರ್ಥ್ಯ ಹೊಂದಿರುವ ವಿಶಿಷ್ಟ ಕಲಾವಿದರೂ ಆಗಿ ಗುರುತಿಸಲ್ಪಟ್ಟಿದ್ದಾರೆ.
ಇದೀಗ ಅವರು  ಮುಂಡಾಜೆ ಮಂಜುಶ್ರೀ ಭಜನಾ ಮಂದಿರ ಇದರ 
ಅಧ್ಯಕ್ಷರೂ ಹೌದು
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment