Posts

ಉತ್ತಮ ಶಿಕ್ಷಕ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಭಂಡಾರಿ ಅವರಿಗೆ ವಸಂತ ಬಂಗೇರರಿಂದ ಸನ್ಮಾನ

0 min read


ಬೆಳ್ತಂಗಡಿ; ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ  ಪುರಸ್ಕೃತರಾದ ಕಳಿಯ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಳ್ಳುಕಲ್ಲು ಇಲ್ಲಿನ ಮುಖ್ಯ ಶಿಕ್ಷಕ  ಪಿ. ಶಿವಾನಂದ ಭಂಡಾರಿ ಅವರಿಗೆ , ಬೊಳ್ಳುಕಲ್ಲು ಶಾಲೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಮಂಗಳವಾರ ಸನ್ಮಾನಿಸಿ‌ ಗೌರವಿಸಿದರು.

ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಹಸನಬ್ಬ ಯಾನೆ ಪುತ್ತುಮೋನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಳಿಯ ಗ್ರಾ.ಪಂ ಸದಸ್ಯ ಕೆ. ಎಮ್  ಕರೀಮ್ ಗೇರುಕಟ್ಟೆ,‌ ಶಾಲಾ ಹಳೆ ವಿದ್ಯಾರ್ಥಿ ಸಲೀಂ ಗುರುವಾಯನಕೆರೆ ಶುಭ ಹಾರೈಸಿದರು.

ಸಮಾರಂಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ,  ಸದಸ್ಯರಾದ ಮರಿಟಾ ಪಿಂಟೋ, ಶ್ವೇತಾ, ಮೋಹಿನಿ‌ ಮತ್ತು ಪುಷ್ಪಾ, ತಾ.ಪಂ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಕಳಿಯ, ಮುಖಂಡರಾದ ಬಿ.ಕೆ ವಸಂತ, ಉಮೇಶ್ ಬಳ್ಳಿದಡ್ಡ, ಪ್ರಭಾಕರ್, ಸತೀಶ್, ಸಹಶಿಕ್ಷಕಿ ವನಿತಾ, ಎಸ್‌ಡಿಎಂಸಿ ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಇವರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment