ಬೆಳ್ತಂಗಡಿ; ಕಾಜೂರು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾಶರೀಫ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರಹ್ಮಾನಿಯಾ ಪ್ರೌಢ ಶಾಲೆ ಇದರ ವಿದ್ಯಾರ್ಥಿ ಪೋಷಕರ ಮತ್ತು ಶಿಕ್ಷಕರ ಸಭೆಯು ಆ. 2 ರಂದು ರಹ್ಮಾನಿಯಾ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಕಾಜೂರು ಆಡಳಿತ ಮಂಡಳಿಯ ಅಧ್ಯಕ್ಷ ಕೆ ಯು ಇಬ್ರಾಹಿಂ ವಹಿಸಿದ್ದರು.
ಸಮಿತಿ ಉಪಾಧ್ಯಕ್ಷ ಕೆ ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ ಹೆಚ್, ಸದಸ್ಯರಾದ ಬದ್ರುದ್ದೀನ್, ಎನ್ .ಎಂ ಯಾಕುಬ್, ಉಮರ್ ಕುಂಞಿ ಕೆ.ಹೆಚ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯೋಪಾಧ್ಯಾಯ ಆಶಿಕ್ ಸಖಾಫಿ ಸ್ವಾಗತಿಸಿದರು. ಸ್ಥಳೀಯ ಸದರ್ ರಶೀದ್ ಮದನಿ ದುವಾ ನೆರವೇರಿಸಿದರು.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆದು, ಮುಂದಿನ 2021/2022 ಸಾಲಿನ ಪಿಟಿಎ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಪಿ.ಎ ಮುಹಮ್ಮದ್ ಪಾದೆಗುತ್ತು,
ಉಪಾಧ್ಯಕ್ಷರುಗಳಾಗಿ ಜೆ.ಹೆಚ್ ಉಸ್ಮಾನ್ ಮತ್ತು ಡಿವೈ ಉಮ್ಮರ್ ಕುಕ್ಕಾವು, ಸದಸ್ಯರುಗಳಾಗಿ ಅಬ್ದುಲ್ ಅಝೀಜ್ ಪಾದೆಗುತ್ತು,
ಉಸ್ಮಾನ್ ಪಗರೇ,
ಅಬ್ದುಲ್ ಅಝೀಜ್ ಜಿ ನಗರ, ಶಾಫಿ ಹೆಡ್ಯಾ, ಡಿಹೆಚ್ ಮುಸ್ತಾಫ ಕಾಜೂರ್, ಇಸ್ಮಾಯಿಲ್ ದಿಡುಪೆ
ಅವರು ಅವಿರೋದವಾಗಿ ಆಯ್ಕೆಯಾದರು. ಸಹ ಶಿಕ್ಷಕ ಸಮೀರ್ ಧನ್ಯವಾದವಿತ್ತರು.