ಬೆಳ್ತಂಗಡಿ; ಕುವೆಟ್ಟು ಗ್ರಾ.ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಕೋಡಿ ಮನೆ ಸದಾಶಿವ ಸಪಲ್ಯ ಅವರ ಪುತ್ರಿ ಕು.ಅರ್ಪಿತಾ ಎಸ್ ಇವರ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಅಭಯಾ ವೃಂದ ಉಜಿರೆ ವತಿಯಿಂದ ಆರ್ಥಿಕ ಅಭಯ ನೀಡುವ ಮಾದರಿ ಕಾರ್ಯ ಜು. 11 ನೇ ರವಿವಾರ ನಡೆಯಿತು.
ಅಭಯಾ ವೃಂದ ಉಜಿರೆ ತಂಡದ ಸಂಸ್ಥಾಪಕ ಸಂಚಾಲಕಿ ಶುಭಾ ರೈ ಅವರ ನೇತೃತ್ವದಲ್ಲಿ ಫಲಾನುಭವಿಯನ್ನು ಭೇಟಿ ಮಾಡಿದ ನಿಯೋಗದಲ್ಲಿ ಅಭಯಾವೃಂದದ ಪ್ರಮುಖರಾದ ರೂಪಾ ವಿನೋದ್, ರೂಪಾ ಜಾಗದೀಶ್, ವನಿತಾ ಶೇಖರ್, ಅಮೃತಾ ವಿ ಶೆಟ್ಟಿ, ಅಕ್ಷಯ ಅಶೋಕ್ ಇವರು ಉಪಸ್ಥಿತರಿದ್ದರು.