ಬೆಳ್ತಂಗಡಿ; ಕಳೆದ ಒಂದೂವರೆ ವರ್ಷದಿಂದ ಮುಂಡಾಜೆಯಲ್ಲಿ ಆರಂಭವಾಗಿರುವ ಹೆಲ್ಪ್ಲೈನ್ ಮುಂಡಾಜೆ ವಾಟ್ಸ್ ಆಪ್ ಗ್ರೂಪ್ ಮೂಲಕ ಮುಂಡಾಜೆ ಗ್ರಾಮದ ಉಭಯ ಮಸೀದಿಗಳಿಗೆ 60 ಸಾವಿರ ರೂ.ಮೌಲ್ಯದ ಮಯ್ಯತ್ ಟೆಂಟ್ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.
ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸೀದಿಯನ್ನು ಕೊಡುಗೆ ಹಸ್ತಾಂತರಬಕ್ರೀದ್ ಹಬ್ಬದ ಸಂಭ್ರಮದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಅವರು ಹೆಲ್ಪ್ಲೈನ್ ಪರವಾಗಿ ಈ ಕೊಡುಗೆಯನ್ನು ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಅಬ್ಬಾಸ್ ಕೆ.ಎಮ್ ಮತ್ತು ಕೋಶಾಧಿಕಾರಿ ಹಂಝ ಬಿಎಮ್ಎ ಹಾಗೂ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಟೆಂಟ್ ಮಾದರಿಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ನಲ್ಲಿ ಖತೀಬ್ ಇಬ್ರಾಹಿಂ ಸಖಾಫಿ ಕಬಕ ಅವರು ಸಮಿತಿ ಅಧ್ಯಕ್ಷ ಕೆರೀಮ್ ಕೆ.ಎಸ್ ಮತ್ತು ಕಾರ್ಯದರ್ಶಿ ಶಬೀರ್ ಹಾಗೂ ಪದಾಧಿಕಾರಿಗಳಿಗೆ ಕೊಡುಗೆ ಹಸ್ತಾಂತರಿಸಿದರು. ಸಯ್ಯಿದ್ ಸಿನಾನ್ ಜಮಲುಲ್ಲೈಲಿ ತಂಙಳ್ ಹಾಜರಿದ್ದರು.
ಈ ಕೊಡುಗೆಯ ಪೈಕಿ ಒಂದು ಟೆಂಟಿನ ಎಲ್ಲಾ ಮೊತ್ತವನ್ನು, ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನಗಲಿದ ಹಿರಿಯ ಚಾಲಕ ಇಬ್ರಾಹಿಂ ಅವರ ಹೆಸರಿನಲ್ಲಿ ಅವರ ಸಹೋದರ ಇಸ್ಹಾಕ್ ಅವರ ಮುತುವರ್ಜಿಯಿಂದ ಅವರ ಮಕ್ಕಳು ಸಮರ್ಪಿಸಿದರೆ, ಇನ್ನೊಂದಕ್ಕೆ ಜಂಟಿ ಜಮಾಅತ್ ನ ದಾನಿಗಳು ನೆರವು ನೀಡಿದ್ದಾರೆ. ಕೊಡುಗೆ ಹಸ್ತಾಂತರ ಸಂದರ್ಭ ಗ್ರೂಪ್ ಎಡ್ಮಿನ್ ಗಳು ಭಾಗವಹಿಸಿದ್ದರು.;
ಈ ಟೆಂಟ್ ಸ್ಥಳದಲ್ಲೇ ಜೋಡಿಸುವ ವಿನ್ಯಾಸದ್ದಾಗಿದ್ದು, ಜಮಾಅತ್ ಗಳಲ್ಲಿ ಯಾರಾದರೂ ಮರಣ ಹೊಂದಿದರೆ ಧಾರ್ಮಿಕ ವಿಧಿಯಂತೆ ಅವರ ದೇಹ ಸ್ನಾನ ಮಾಡಿಸಲು ಅನುಕೂಲವಾಗುವಂತೆ ಅದರ ರಚನೆ ಹೊಂದಿದೆ.