ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಏಂಡ್ ಗೈಡ್ಸ್, ಬುಲ್ ಬುಲ್ಸ್ ಇದರಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಾಸಕ ಹರೀಶ್ ಪೂಂಜ ಅವರು ತಮ್ಮ ಅಧಿಕೃತ ಸರಕಾರಿ ಕಚೇರಿ ಶ್ರಮಿಕ ದಲ್ಲಿ ಗೌರವಿಸಿದರು.
ಪುರಸ್ಕಾರಕ್ಕೆ ಅರ್ಹರಾಗಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆ ಬೆಳ್ತಂಗಡಿಯ 11 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು, ಇದರ ಕರ್ನಾಟಕ ರಾಜ್ಯ ಸಂಸ್ಥೆ ಆಯೋಜಿಸಿದ್ದ ಬುಲ್ ಬುಲ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯ ಪುರಸ್ಕಾರ ಹಾಗೂ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಷ್ಟ್ರ ಸಂಸ್ಥೆ ಆಯೋಜಿಸಿದ ಗೋಲ್ಡನ್ ಆ್ಯರೊ ರಾಷ್ಟ್ರ ಪುರಸ್ಕಾರ ಪಡೆದ ನಾಲ್ಕು ವಿದ್ಯಾರ್ಥಿಗಳು, ಮತ್ತು ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ರಾಜ್ಯ ಪುರಸ್ಕಾರ ಪಡೆದ ನಾಲ್ವರು ಸಾಧಕ ವಿದ್ಯಾರ್ಥಿಗಳನ್ನು ಶಾಸಕರು ಗೌರವಿಸಿದರು.
ಇವರ ಜತೆಗೆ ಸಾಧನೆಗೆ ಸಂಪೂರ್ಣ ಶ್ರಮವಹಿಸಿದ ಶಿಕ್ಷಕರನ್ನೂ ಗೌರವಿಸಿ ಅಭಿನಂದಿಸಿದರು.
ಸ್ಥಳೀಯ ಸಂಸ್ಥೆ ಅಧ್ಯಕ್ಷ ವಿಠಲ ಶೆಟ್ಟಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಹಾಗೂ ಶ್ರೀ ಮಂ.ಆಂ.ಶಾಲೆ ಸ್ಕೌಟ್ ಗೈಡ್ಸ್ ಕ್ಯಾಪ್ಟನ್ ಪ್ರಮೀಳಾ, ಸೈಂಟ್ ಮೇರಿಸ್ ಸ್ಕೌಟ್ಸ್ ಗೈಡ್ಸ್ ಶಿಕ್ಷಕ ಅಜಿತ್ ಕುಮಾರ್, ಮಕ್ಕಳ ಪೋಷಕರು ಉಪಸ್ಥಿತರಿದ್ದರು.