ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಮುಂಡಾಲುವಿನ, ಪ್ರಸ್ತುತ ಬೆಳ್ತಂಗಡಿ ನಿವಾಸಿ ಗಿರೀಶ್ ಭಿಡೆ(57ವ.)ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜೂ. 25ರಂದು ನಿಧನ ಹೊಂದಿದರು.
ಬಾಡಿಗೆ ವಾಹನಗಳನ್ನು ಹೊಂದಿದ್ದ ಅವರು ಬೆಳ್ತಂಗಡಿಯ ಎಸ್ ಬಿ ಐ, ಬಿಎಸ್ಎನ್ಎಲ್ ಗಳಿಗೆ ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದರು.
ಮೃತರು ಪತ್ನಿ ಆಶಾ, ಪುತ್ರಿಯರಾದ ಮಾನಸ ಮತ್ತು ಮನೀಷಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.