ಬೆಳ್ತಂಗಡಿ: ನೆರಿಯ ಗ್ರಾ. ಪಂ. ಮತ್ತು ಗಂಡಿಬಾಗಿಲು ಸಂತ ಥೋಮಸರ ದೇವಾಲಯ ಗಂಡಿಬಾಗಿಲು ಇದರ ಸಹಯೋಗದಲ್ಲಿ ವಿನೂತನ ಮಾದರಿಯ ಕಾರ್ಯಕ್ರಮ ಜೂ.9 ರಂದು ನೆರಿಯ ಗ್ರಾ. ಪಂ. ನಲ್ಲಿ ನಡೆಯಿತು.
ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಆರೋಗ್ಯ ಕಳೆದುಕೊಂಡವರ ಆರೋಗ್ಯ ಸುಧಾರಣೆಗಾಗಿ ಪೌಷ್ಟಿಕ ಆಹಾರದ ರೂಪದಲ್ಲಿ ವಿತರಿಸಲು
ಸುಮಾರು 2000 ಕೋಳಿ ಮೊಟ್ಟೆಗಳನ್ನು ಧರ್ಮಗುರು ಷಾಜಿ ಮಾತ್ಯು, ಟೈಟಸ್, ಸುಜನ್, ಮನೋಜ್, ಜೋಸೆಫ್, ಚಾಂಡಿ ಜೋಯ್ ಇವರ ನೇತೃತ್ವದಲ್ಲಿ ಗ್ರಾ. ಪಂ. ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲಾ, ಹಿರಿಯ ಸದಸ್ಯ ಬಾಬು ಗೌಡ ಪರ್ಪಳ, ಅಶ್ರಫ್, ಮೊಹಮ್ಮದ್, ಸಚಿನ್ ಹಾಗೂ ಇತರ ಸದಸ್ಯರು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗ, ಆಶಾ ಕಾರ್ಯ ಕರ್ತೆಯರ ಸಮ್ಮುಖದಲ್ಲಿ ಇಲಾಖೆಗೆ ಹಸ್ತಾಂತರಿಸಲಾಯಿತು. ಮೊಟ್ಟೆಗಳನ್ನು ಅರ್ಹ ಫಲಾನುಭವಿ ಕುಟುಂಬ ಗಳಿಗೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆಯಲ್ಲಿರುವ ಪ್ರಾಥಮಿಕ ಆರೋಗ್ಯಕೇಂದ್ರ ಸಿಬ್ಬಂದಿವರ್ಗ, ಆಶಾ ಕಾರ್ಯಕರ್ತರು, ಅಂಗನವಾಡಿ ಸಹಾಯಕರಿಗೂ ವಿತರಿಸಲಾಯಿತು.