ಬೆಳ್ತಂಗಡಿ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಆಗಮಿಸಿದ್ದ ಶಿರ್ಲಾಲು ಸಮೀಪದ ಮಜಲಡ್ಡ ನಿವಾಸಿ ಲಲಿತಾ (38ವ.)ಎಂಬ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅರ್ಧ ದಾರಿಯಲ್ಲೇ ಅವರಿಗೆ ಆಂಬುಲೆನ್ಸ್ ನ ಒಳಗಡೆಯೇ ಹೆರಿಗೆಯಾಗಿದೆ.
ತುರ್ತು ಕರೆ ಆಧರಿಸಿ ಆಗಮಿಸಿದ್ದ ಕೊಕ್ಕಡದ 108 ಅಂಬುಲೆನ್ಸ್ ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ವಾಹನ ಮಡಂತ್ಯಾರು ಸಮೀಪಿಸುತ್ತಿದ್ದಂತೆ ಮಹಿಳೆಗೆ ವಿಪರೀತ ನೋವು ಉಲ್ಬಣಗೊಂಡಿತು. ತಕ್ಷಣ ಕಾರ್ಯ ಪ್ರವರ್ತರಾದ ಆರೋಗ್ಯ ಶುಶ್ರೂಶಕಿ ವಿಲ್ಮಾ ಅವರು ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಿ ಯಶಸ್ವಿಯಾಗಿ ಹೆರಿಗೆ ನಡೆಸಿಕೊಟ್ಟಿದ್ದಾರೆ.
ಈ ವೇಳೆ ವಾಹನ ಚಾಲಕ ಗಿರೀಶ್ ಅವರೂ ಸಹಾಯಿಯಾಗಿದ್ದು, ಇಬ್ಬರು ಆರೋಗ್ಯ ಕಾರ್ಯಕರ್ತರ ಸಕಾಲಿಕ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ಬಾಣಂತಿಯನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆ ದಾಖಲಿಸಲಾಗಿದ್ದು, ತಾಯಿ ಮಗು ಇಬ್ನರೂ ಆರೋಗ್ಯವಾಗಿದ್ದಾರೆ.