ಬೆಳ್ತಂಗಡಿ: ಮುಂಡಾಜೆ ಸರಕಾರಿ ಉನ್ನತೀಕರಿಸಿದ ಮಾದರಿ ಶಾಲೆಯ ಶತಮಾನೋತ್ಸವದ ಪೂರ್ವಭಾವಿಯಾಗಿ ಫೆ. 7 ರಂದು ಗ್ರಾಮದ ಸರ್ವ ಸದಸ್ಯರ ವಿಶೇಷ ಸಭೆ ನಡೆಯಲಿದ್ದು, ಸರ್ವ ಧರ್ಮೀಯರ ಗಮನಸೆಳೆಯಲು ಫೆ.3 ರಂದು ಸೈಂಟ್ ಮೇರಿ ಚರ್ಚ್ ಗೆ ಭೇಟಿ ನೀಡಿ ಸಮಾಲೋಚನೆ ನಡೆಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ರಾವ್ ಅಡೂರು ಅಧ್ಯಕ್ಷತೆ ವಹಿಸಿದ್ದರು.
ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸುರೇಶ್ ಹೆಗ್ಡೆ, ಕೋಶಾಧಿಕಾರಿ ಬಾಬು ಪೂಜಾರಿ ಕೂಳೂರು, ಹಿರಿಯ ಸದಸ್ಯ ವಿಠಲ ರಾವ್ ಸಂಪಿಗೆ, ಸದಸ್ಯೆ ಶ್ರೀಮತಿ ಅಕ್ಕು, ಎಸ್ಡಿಎಂಸಿ ಸದಸ್ಯ ರಮೇಶ್ ಶೆಟ್ಟಿ, ಉದ್ಯಮಿ ಹಾಗೂ ಕೃಷಿಕ ಪ್ರಹ್ಲಾದ ಫಡ್ಕೆ,
ಮುಹಮ್ಮದ್ ನಝೀರ್, ಸಿದ್ದೀಕ್ ಸಾಗರ್ ಗ್ರೂಪ್ ಮೊದಲಾದವರು ಭಾಗವಹಿಸಿದ್ದರು.
ಎಸ್ಡಿಎಂಸಿ ಸದಸ್ಯರೂ ಆಗಿರುವ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ವಿಷಯ ಪ್ರಸ್ತಾವನೆಗೈದರು.
ಚರ್ಚ್ನ ಪ್ರಧಾನ ಧರ್ಮಗುರುಗಳಾದ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್ತ್ ಸ್ವಾಗತಿಸಿದರು. ಪಾಲನಾ ಸಮಿತಿಯ ಪಾಪಚ್ಚನ್ ಅರಸಮಜಲು, ಜೋನ್ ಕನ್ನಾಡನ್, ಉದ್ಯಮಿ ಅಬ್ರಹಾಂ, ಕೃಷಿಕ ಥೋಮಸ್ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಚರ್ಚ್ ಸಮಿತಿಯ ಜೋಯ್ ಮಾತನಾಡಿ, ಎಲ್ಲ ರೀತಿಯಿಂದಲೂ ಸಹಕರಿಸುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಳೆದ ಐವತ್ತು ವರ್ಷಗಳ ಅಧ್ಯಕ್ಷರಾಗಿರುವ ಗೋಪಾಲಕೃಷ್ಣ ರಾವ್ ಅಡೂರು ಅವರನ್ನು ಚರ್ಚ್ ವತಿಯಿಂದ ಶಾಲುಹೊದಿಸಿ ಗೌರವಿಸಲಾಯಿತು. ವಿನ್ಸೆಂಟ್ ಡಿಪೌಲ್ ಸೊಸೈಟಿ ತೋಟತ್ತಾಡಿ ಏರಿಯಾ ಕೌನ್ಸಿಲ್ ಅಧ್ಯಕ್ಷ
ಸೆಬಾಸ್ಟಿಯನ್ ಪಿ.ಸಿ ಅಭಿನಂದಿಸಿದರು.