Posts

ಪಟ್ರಮೆ ಬಳಿ ಕಡಿದ‌ ಮರದಡಿ ಸಿಲುಕಿ ಮೂವರು ದುರ್ಮರಣ

0 min read

 


ಬೆಳ್ತಂಗಡಿ: ಮರ ಕಡಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದರ ಅಡಿಗೇ ಸಿಲುಕಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ಮಾ.9 ರಂದು ಮಧ್ಯಾಹ್ನ ನಡೆದಿದೆ.

ಪಟ್ರಮೆ ಗ್ರಾಮದ ಕಾಯಿಲ ಎಂಬಲ್ಲಿ ದೂಪದ ಮರ ಕಡಿಯುವ ವೇಳೆ ಈ‌ ದುರ್ಘಟನೆ ಸಂಭವಿಸಿದೆ.



ಉಳಿಯ ಮನೆ‌ ನಿವಾಸಿ ರಾಮಣ್ಣ ಕುಂಬಾರ ಎಂಬವರ ಪುತ್ರ ಪ್ರಶಾಂತ್(23ವ.‌),ಸೇಸಪ್ಪ ಪೂಜಾರಿಯವರ ಪುತ್ರ ಸ್ವಸ್ತಿಕ್ (25ವ.)ಮತ್ತು ಇನ್ನೋರ್ವ ಉಪ್ಪಿನಂಗಡಿಯ ಗಣೇಶ್ 38ವ.) ಈ‌ ಮೂವರು ಮೃತಪಟ್ಟವರು.



ಅನಾರು ಕಾಯಿಲ ಲೋಕಯ್ಯ ಗೌಡರಿಗೆ ಸೇರಿದ ಸ್ಥಳದಲ್ಲಿ‌ ಕೆಲಸ ಮಾಡುತ್ತಿದ್ದಾಗ ಘಟನೆ ನಡೆದಿದೆ‌.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ,  ಧರ್ಮಸ್ಥಳ ಠಾಣಾ ಎಸ್  .ಐ ಪವನ್ ನಾಯಕ್  ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ‌.






ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment