ಬೆಳ್ತಂಗಡಿ; ರಾಕ್ ಜಿಮ್ ಗುರುವಾಯನಕೆರೆ ಇದರ ವತಿಯಿಂದ ಇಲ್ಲಿನ ಪನತ್ತಿರ್ ಮಾಲ್ ನಲ್ಲಿ ತಾಲೂಕಿನಲ್ಲಿ ಮೊತ್ತಮೊದಲ ಬಾರಿಗೆ ಜಿಲ್ಲಾ ಮಟ್ಟದ ದೇಹದಾರ್ಢ್ ಸ್ಪರ್ಧೆ ಆಯೋಜನೆಗೊಳಿಸಲಾಗಿದೆ ಎಂದು ಕಾರ್ಯಕ್ರಮ ಪ್ರಧಾನ ಸಂಯೋಜಕ ನವಾಝ್ ಶರೀಫ್ ಕಟ್ಟೆ ಹೇಳಿದರು.
ನಗರದ ವಾರ್ತಾಭವನದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.
6 ಬಾರಿ ಮಿಸ್ಟರ್ ಇಂಡಿಯಾ ಹಾಗೂ ಒಂದು ಬಾರಿ ಮಿಸ್ಟರ್ ಏಷ್ಯಾ ಆಗಿ ಹೊರಹೊಮ್ಮಿರುವ ಹಾಗೂ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಭಾರತ ದೇಶದ ಉಪಾಧ್ಯಕ್ಷ ರಮೀಝ್ ಅವರ ಎನ್ಬಿಬಿಎ ಸಂಸ್ಥೆಯ ಮಾರ್ಗದರ್ಶನದಲ್ಲಿ ಸ್ಪರ್ಧೆ ನಡೆಯಲಿದೆ. ಇದರಲ್ಲಿ 200 ರಷ್ಟು ದೇಹದಾರ್ಢ್ಯತಾ ಪಟುಗಳು ಭಾಗಿಯಾಗಲಿದ್ದಾರೆ.
ಪಣತ್ತೀರ್ ಮಾಲ್ನಲ್ಲಿ ರೋಕ್ ಜಿಮ್ ನಡೆಸುತ್ತಿರುವ ಅನುಭವಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪೊಲೀಸರು ಮತ್ತು ಫಿಲ್ಮ್ ಸ್ಟಾರ್ ಗಳಿಗೆ ಜಿಮ್ ತರಬೇತುದಾರರಾಗಿದ್ದ ಗುರುವಾಯನಕೆರೆಯ ಮಸೂದ್ ಮತ್ತು ಶಮೀರ್ ಅವರ ಈಗಾಗಲೇ ಹಲವು ಮಂದಿಯನ್ನು ತಯಾರುಗೊಳಿಸಿದ್ದಾರೆ ಎಂದು ವಿವರ ನೀಡಿದರು.
ಶನಿವಾರ ನಡೆಯುವ ದೇಹದಾರ್ಢ್ಯ ಸ್ಪರ್ಧೆಯನ್ನು ಡಿ. ಹರ್ಷೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಯಮಿ ಹನೀಫ್ ಖಾನ್ ಕೊಡಾಜೆ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ,ಮಾಜಿ ಶಾಸಕ ವಸಂತ ಬಂಗೇರ, ಡಿವೈಎಸ್ಪಿ ವೆಲೆಂಟೈನ್ ಡಿಸೋಜ ಸಹಿತ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಶಮೀಮ್, ಮಸೂದ್, ಶಮೀರ್, ಸುಜನ್ ರೈ, ಅನ್ಸಾಫ್, ಬದ್ರುದ್ದೀನ್ ಉಪಸ್ಥಿತರಿದ್ದರು.