Posts

ಲಯನ್ಸ್ ಜಿಲ್ಲಾ “ಜನಪದ ವೈಭವ” ಮುಖ್ಯ ಸಂಯೋಜಕರಾಗಿ ಲ|ನಿತ್ಯಾನಂದ ನಾವರ ನೇಮಕ

1 min read

 




ಬೆಳ್ತಂಗಡಿ: ದ.ಕ.ಜಿಲ್ಲೆ ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ಸ್ ಜಿಲ್ಲೆ 317 ಡಿ ಯ ಸುಮಾರು 100 ಲಯನ್ಸ್ ಕ್ಲಬ್‌ಗಳಿಗೆ 2021 ರ “ಜನಪದ ವೈಭವ” ಸಾಂಸ್ಕೃತಿಕ ಕಾರ್ಯಕ್ರಮಗಳನ್ನು

ಹಮ್ಮಿಕೊಂಡಿದ್ದು, ಇದರ  ಮಹತ್ತರ ಜವಾಬ್ದಾರಿಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಲಯನ್ಸ್ ವಲಯಾಧ್ಯಕ್ಷ ಮಾಜಿ ಮತ್ತು ‘ಕನಸು’ ಪ್ರಾಂತೀಯ ಸಮ್ಮೇಳನದ ಅದ್ಭುತ ಯಶಸ್ಸಿನ ರುವಾರಿ ಮಾಜಿ

ಪ್ರಾಂತೀಯ ಅಧ್ಯಕ್ಷ ಲ| ನಿತ್ಯಾನಂದ ನಾವರ ಅವರನ್ನು ಜಿಲ್ಲಾ ಮುಖ್ಯ ಸಂಯೋಜಕರಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.‌ಗೀತ್‌ಪ್ರಕಾಶ್ ಅವರು

ನೇಮಿಸಿದ್ದಾರೆ.


ಈ ಜಾನಪದ ವೈಭವ ಕಾರ್ಯಕ್ರಮದ‌ ಮೂಲಕ ಕಲೆಯ ಎಲ್ಲಾ ಪ್ರಕಾರಗಳ  ಪ್ರದರ್ಶನ ಹಾಗೂ ಸ್ಫರ್ಧೆಗಳನ್ನು

ಹಮ್ಮಿಕೊಂಡು ಕಲಾಸಕ್ತರಿಗೆ ಹಾಗೂ ಯುವ ಪೀಳಿಗೆಗೆ ಅವುಗಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶ

ಇಟ್ಟುಕೊಳ್ಳಲಾಗಿದೆ. 


ಈ ತಂಡದಲ್ಲಿ ಸಹ ಸಂಯೋಜಕರಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಲ| ವಸಂತ

ಶೆಟ್ಟಿ, ಲಯನ್ಸ್ ಕ್ಲಬ್ ಮಾಣಿ ಇದರ ನಿಕಟಪೂರ್ವ ಅಧ್ಯಕ್ಷ ಲ| ಗಂಗಾಧರ ರೈ ಪಿ., ಲಯನ್ಸ್

ಕ್ಲಬ್ ಮುಚ್ಚೂರು-ನೀರುಡೆ ನಿಕಟಪೂರ್ವ ಅಧ್ಯಕ್ಷ ಲ| ಪ್ರದೀಪ್ ಎಲ್. ಶೆಟ್ಟಿ ಹಾಗೂ ಲಯನ್ಸ್ ಕ್ಲಬ್

ಪಂಜ ಇದರ ಮಾಜಿ ಕಾರ್ಯದರ್ಶಿ ಲ| ಶಶಿಧರ ಪಾಲಂಗಾಯ ಇವರುಗಳೂ ನೇಮಕಗೊಂಡಿದ್ದಾರೆ.


ಮುಖ್ಯ ಸಂಯೋಜಕರಾಗಿ ನೇಮಕವಾಗಿರುವ ಲ| ನಿತ್ಯಾನಂದ ನಾವರ ಅವರು ಎಲ್ಲರ ಸಹಕಾರದೊಂದಿಗೆ ಉತ್ಕೃಷ್ಟ

ಮಟ್ಟದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದು,‌ಅದಕ್ಕಾಗಿ ಈಗಾಗಲೇ ಸಭೆಗಳನ್ನು ನಡೆಸಿ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿ ಕಲಾಪ್ರದರ್ಶನ

ಏರ್ಪಡಿಸಲು ಯೋಜನೆ‌ ರೂಪಿಸಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment