ಬೆಳ್ತಂಗಡಿ; ಓಡಿಲ್ನಾಳ ಗ್ರಾಮದ ರೇಷ್ಮೆ ರಸ್ತೆಯಲ್ಲಿರುವ ಫಾದರ್ ಜಾನ್ ತೋಮಸ್ ಅವರ ಪುಷ್ಪನಿಕೇತನ ಆಶ್ರಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ಮೂಲಕ ಯುವಕನೊಬ್ಬ ವಿದ್ಯುತ್ ಅವಘಡದಿಂದ ಮೃತಪಟ್ಟ ಘಟನೆ ನ.15 ರಂದು ನಡೆದಿದೆ.
ಮೃತರನ್ನು ಜಾರ್ಖಂಡ್ ರಾಜ್ಯದ ರಿತೇಶ್ ಕಿರ್ಕೆಟ್ಟಾ(22) ಎಂಬವರೆಂದು ಗುರುತಿಸಲಾಗಿದೆ.
ಈ ಸಂಬಂಧ ಅವರ ಸಂಗಡಿಗರಾಗಿ ಕೆಲಸ ಮಾಡಿಕೊಂಡಿದ್ದ ಜಾರ್ಖಂಡ್ ನ ಲುಕಾಸ್ ಡುಂಗ್ ಡುಂಗ್ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ.15 ರಂದು 11.45 ವೇಳೆ ರೇಷ್ಮೆ ರಸ್ತೆಯಲ್ಲಿರುವ ಆಶ್ರಮದ ಸಮೀಪದ ತೋಟದಲ್ಲಿ ಅಡಿಕೆ ಕೀಳುತ್ತಿದ್ದಾಗ ರಿತೇಶ ಕಿರ್ಕೆಟ್ಟ ಅವರಿಗೆ ತೋಟದ ಮೇಲ್ಗಡೆ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಯಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಯ ಬಗ್ಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತಾದರೂ ವೈದ್ಯರು ಪರೀಕ್ಷಿಸಿ ಮಧ್ಯಾಹ್ನ 12.15 ಗಂಟೆಗೆ ಮೃತಪಟ್ಟಿದ್ದಾಗಿ ಘೋಶಿಸಿದ್ದಾರೆ.