Posts

ಅನುಭವ್ ಪತ್ತೆ ಪೊಲೀಸ್ ಕಾರ್ಯಾಚರಣೆ ಸೇನೆಯ ಸರ್ಜಿಕಲ್ ಸ್ಟ್ರೈಕ್‌ಗೆ ಸಮಾನ; ಶಿವನ್

1 min read

ಬೆಳ್ತಂಗಡಿ: ಚಾಣಾಕ್ಷ ನಡೆ ಮತ್ತು ತಮ್ಮ ಪ್ರಾಣ ಪಣಕ್ಕಿಟ್ಟು  ಪೋಲೀಸರು‌ ನಡೆಸಿದ ಕಾರ್ಯಾಚರಣೆಯಿಂದಾಗಿ ಇಂದು ನನ್ನ ಮೊಮ್ಮಗು ಯಾವುದೇ ಅಪಾಯವಿಲ್ಲದೆ ನಮಗೆ ಮರಳಿ‌ ಸಿಗುವಂತಾಗಿದೆ. ಸೇನಾ ಭಾಷೆಯಲ್ಲಾದರೆ ಇದಕ್ಕೆ ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯುತ್ತೇವೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯೂ ಇದಕ್ಕೆ ಕಡಿಮೆಇಲ್ಲದ್ದು ಎಂದು ಉಜಿರೆಯ ಹಿರಿಯ ಉದ್ಯಮಿ, ಅಪಹೃತ ಬಾಲಕನ ಅಜ್ಜ ಎ.ಕೆ ಶಿವನ್ ಹೇಳಿದ್ದಾರೆ.

ಆಪರೇಷನ್ ಅನುಭವ್ ಕಾರ್ಯಾಚರಣೆ ಯಲ್ಲಿ ಸಹಕಾರಿಯಾದವರಿಗೆ ಕೃತಜ್ಞತೆ ಸಲ್ಲಿಸಲು ಬಾಲಕನ ಮನೆಯವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ನಾನು 18 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದು ಆ ವೇಳೆ ಎರಡು ಯುದ್ಧ ಎದುರಿಸಿದ್ದೇನೆ. ಕರಾಚಿಯಲ್ಲಿ 23 ದಿನ ನೀರಿನೊಳಗೆ ಕಾಲ ಕಳೆದ ದಿನವಿದೆ. ಆದರೆ ನನ್ನ ಮೊಮ್ಮಗನನ್ನು ಅಪಹರಿಸಿದ ದಿನ ಅನುಭವಿಸಿದ ನೋವು ಎಂದೂ ಅನುಭವಿಸಿರಲಿಲ್ಲ ಎಂದು ಅವರು ತನ್ನ ಒಡಳಾಲದ ತುಮುಲ‌ ಬಿಚ್ಚಿಟ್ಟರು.

ದ.ಕ ಎಸ್. ಪಿ ನೇತೃತ್ವದ ಇಡೀ ಪೊಲೀಸ್ ತಂಡ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಎಸ್‌ಐ ಗಳಾದ ನಂದ ಕುಮಾರ್, ಕುಮಾರ್ ಎಸ್. ಕಾಂಬ್ಲೆ, ಪವನ್ ನಾಯಕ್, ಮತ್ತು ಸಿಬ್ಬಂದಿಗಳು, ತ್ವರಿತ ಗತಿಯಲ್ಲಿ ಫಾರ್ಚುನರ್ ಚಲಾಯಿಸಿ ನಿಗಧಿತ ಸಮಯಕ್ಕಿಂತ ಮೊದಲೇ ಸ್ಥಳಕ್ಕೆ ತಲುಪುವಲ್ಲಿ ಸಹಕಾರಿಯಾ ಅಜಯ್ ಶೆಟ್ಟಿ ಅವರಿಗೆ, ಮಹೇಶ್ ಶೆಟ್ಟಿ, ರವಿ ಚಕ್ಕಿತ್ತಾಯ ಸಹಿತ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.

ನಾನು ಯಾರಿಗೂ ಹಣ ನೀಡಲು ಬಾಕಿ ಇಲ್ಲ; ಇದ್ದರೆ ದಾಖಲೆ ತೋರಿಸಲಿ; ಅನುಭವ್ ತಂದೆ ಬಿಜೋಯ್

ಅನುಭವ್‌ನ ತಂದೆ ಬಿಜೋಯ್ ಮಾತನಾಡಿ, ಬಿಟ್ ಕಾಯಿನ್ ವ್ಯವಹಾರದಿಂದ ಈ ಘಟನೆ ನಡೆದಿದೆ ಮತ್ತು ನಾನು ಹಣ ಪಾವತಿಸಲು ಬಾಕಿ ಇದ್ದು ಅದಕ್ಕಾಗಿ ಈ ಅಪಹರಣ ಆಗಿದೆ ಎಂಬ ಮಾಹಿತಿಗಳು ರವಾನೆಯಾಗುತ್ತಿದೆ. ಆದರೆ ನಾನು ಯಾರಿಗೂ  ವಂಚಿಸಿಲ್ಲ. 2016 ರಲ್ಲಿ ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿದ್ದು ಬಳಿಕ 2018 ರಲ್ಲಿ ಭಾರತವು ಬಿಟ್ ಕಾಯಿನ್‌ನ್ನು ರದ್ದುಗೊಳಿಸಿತ್ತು. ಮತ್ತೆ 2019 ರಲ್ಲಿ ಇದನ್ನು ಅಧಿಕೃತ ವ್ಯವಹಾರವನ್ನಾಗಿ ಮಾಡಿದೆ. ನಾನು  ಯಾವುದೇ ವ್ಯವಹಾರದಲ್ಲಿ ಯಾರಿಗೂ ಹಣ ನೀಡಲು ಇಲ್ಲ. ಹಾಗೇನಾದರೂ ಹಣ ನೀಡಲು ಬಾಕಿ ಇದ್ದರೆ ದಾಖಲೆ ಸಹಿತ ಪೊಲೀಸರಿಗೆ ಮಾಹಿತಿ‌ ನೀಡಿದರೆ ಒಂದು ತಿಂಗಳೊಳಗೆ ಹಣ ನೀಡಲು ಸಿದ್ದನಿದ್ದೇನೆ ಎಂದರು. ಶ್ರೀಮಂಜುನಾಥ ಸ್ವಾಮಿ, ‌ಜನಾರ್ದನ ಸ್ವಾಮಿಯ ಅನುಗ್ರಹ ಹಾಗೂ ಜನರ ಹಾರೈಕೆಯಿಂದಲೇ ಮಗು ಸುರಕ್ಷಿತವಾಗಿ ನಮ್ಮ ಕೈ ಸೇರಿದೆ ಎಂದರು. 

ನಮಗೆ ಇನ್ನೂ ಭಯ ಹೋಗಿಲ್ಲ; 

ಬಾಲಕನ ತಾಯಿ ಸರಿತಾ ಮಾತನಾಡಿ, ನನ್ನ ಮತ್ತು ಮಾವನ ಕಣ್ಣೆದುರೇ ನಮ್ಮ ಮಗುವಿನ ಅಪಹರಣವಾಗಿದ್ದ ಘಟನೆ ನೆನೆದುಕೊಂಡರೆ ಈಗಲೂ ಭಯವಾಗುತ್ತಿದೆ. ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಮಗು ಸುರಕ್ಷಿತವಾಗಿದೆ. ಇವರ ಸೇವೆಯನ್ನು ಮರೆಯಲು ಅಸಾಧ್ಯ.ಮಗುವಿನ ಪತ್ತೆಯಲ್ಲಿ  ಸಾರ್ವಜನಿಕರ ಸಹಕಾರ, ದೇವರ ಅನುಗ್ರವೇ ಇದಕ್ಕೆಲ್ಲ ಕಾರಣ ಎಂದರು.

ಬಾಲಕ‌ ಕೂಡ ಮಾತನಾಡಿ ಮಾಧ್ಯಮದ ವರೂ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment