Posts

ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಜಯಕೀರ್ತಿ ಜೈನ್ ಧರ್ಮಸ್ಥಳರಿಗೆ ಹೃದಯವಂತ ಪ್ರಶಸ್ತಿ

0 min read

 

ಬೆಳ್ತಂಗಡಿ; ಕರ್ನಾಟಕ ರಾಜ್ಯ ಸರಕಾರಿ‌ ನೌಕರರ ಸಂಘದ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ ಯೂ ಆಗಿರುವ ಡಾ. ಜಯಕೀರ್ತಿ ಜೈನ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ‌ ಅನುಪಮ‌ ಸೇವೆಯನ್ನು ಗುರುತಿಸಿ 'ಹೃದಯವಂತ ಪ್ರಶಸ್ತಿ -2020' (ನೋಬೆಲ್ ಮೇನ್ ಅವಾರ್ಡ್) ನೀಡಿ ಗೌರವಿಸಲಾಗಿದೆ.

ಹೃದಯವಾಹಿನಿ ಕರ್ನಾಟಕ ಮಂಗಳೂರು, ಎಸ್.ಕೆ‌ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಇವರ ಆಯೋಜನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಿ.12 ರಂದು ಮಂಗಳೂರು ಪುರಭವನದಲ್ಲಿ ನಡೆದ 12 ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಲನದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನವಾಗಿದೆ. ಸಮ್ಮೇಳನಾಧ್ಯಕ್ಷ,‌ ದೂರದರ್ಶನ ಚಂದನವಾಹಿನಿಯ ನಿವೃತ ಹೆಚ್ಚುವರಿ ಮಹಾ ನಿರ್ದೇಶಕ, ನಾಡೋಜ ಡಾ.‌ಮಹೇಶ್ ಜೋಶಿ, ಮಾಜಿ ಶಾಸಕ ಮೊಯಿದಿನ್ ಬಾವಾ, ಕನ್ನಡ ಅಭಿಯಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು,‌ಬಾವಾ ಕೆ.ಪಿ ಮಂಜುನಾಥ ಸಾಗರ್, ಹಾಗೂ ಎಮ್.ಎಸ್.ಐ.ಎಲ್ ಅಧ್ಯಕ್ಷ ಎಚ್ ಹಾಲಪ್ಪ ಸಹಿತ ಗಣ್ಯರು ಭಾಗಿಯಾಗಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment