Posts

ಕುಡಿತದ ಚಟ ಕೊಲೆಗೆ ಪ್ರಚೋದಿಸಿತು!| ಮಧ್ಯಾಹ್ನ ಅಜ್ಜಿ ಕೊಟ್ಟ ಊಟ ಸೇವಿಸಿ ಬಳಿಕ ಆಕೆಯನ್ನೇ ಕೊಲೆ‌ಮಾಡಿದ ಮೊಮ್ಮಗ!

1 min read

ಆರೋಪಿ ಅಶೋಕ ಗೌಡ ಕಾನರ್ಪ

ಬೆಳ್ತಂಗಡಿ: ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಮನೆಯಲ್ಲಿ ಒಬ್ಬಂಟಿಯಿದ್ದ ವೃದ್ಧೆ ಅಕ್ಕು‌ಅವರನ್ನು ಸಾಯಿಸಿ ಚಿನ್ನ ಅಪಗರಿಸಿದ ಸ್ವತಃ ಮೊಮ್ಮಗನನ್ನೇ ಧರ್ಮಸ್ಥಳ ಪೊಲೀಸರು ಹೆಡೆಮುರಿಕಟ್ಟಿದ್ದಾರೆ‌.

ಪರಿಚಯಸ್ತನಾಗಿ ಮನೆಗೆ ಬಂದು ಅಜ್ಜಿಯ ಜೊತೆ ಪ್ರೀತಿಯಿಂದ ವರ್ತಿಸಿ ಮಧ್ಯಾಹ್ನ ಆಕೆ ನೀಡಿದ ಊಟವನ್ನೂ ಸೇವಿಸಿ ಬಳಿಕ ಆಕೆಯನ್ನು ಹೊಡೆದು ಸಾಯಿಸಿ ಕಿವಿ ಬೆಂಡೋಲೆ ದೋಚ್ಚಿದ್ದೆಂದು ಸ್ವತಃ ಆರೋಪಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. 

ಆರೋಪಿಯನ್ನು ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ಅಶೋಕ ಗೌಡ (32) ಎಂಬಾತನೆಂದು ಗುರುತಿಸಲಾಗಿದೆ.

ಆರೋಪಿ ಮತ್ಯಾರೂ ಅಲ್ಲ  ಅಜ್ಜಿಯ ಸೊಸೆಯ ಅಕ್ಕನ ಮಗನೇ ಆಗಿದ್ದಾನೆ‌. 

ಕೊಲೆ ನಡೆದ ಜಾಗ

ಕೆರೆಕೋಡಿ ಮನೆಯಲ್ಲಿ ಹಾಡಹಗಲೇ ವೃದ್ದೆ  ಮೇಲೆ ಹಲ್ಲೆ ನಡೆಸಿ ಅವರ ಕಿವಿಯಲ್ಲಿದ್ದ ಬೆಂಡೋಲೆ ಕಳ್ಳತನಗೈಯ್ಯಲಾಗಿತ್ತು.
ಶನಿವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿತ್ತು. 
ಕೊಲೆ ನಡೆದ ಅಜ್ಜಿಯ ಮನೆ
ಅಕ್ಕು ಅವರ ಪುತ್ರ ಡೀಕಯ್ಯ ಮತ್ತು ಪತ್ನಿ ಜೊತೆಯಾಗಿ ಬೆಳಗ್ಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದು, ಪುತ್ರಿ ಮೌಲ್ಯಾ(12) ಅವರು ಶಾಲೆಗೆ ಹೋಗಿದ್ದರು. ಮಧ್ಯಾಹ್ನ  2 ಗಂಟೆಗೆ ಶಾಲೆ ಬಿಟ್ಟು ಮನೆಗೆ ಬಂದ ಮೊಮ್ಮಗಳು ಮನೆಯಲ್ಲಿ ಅಜ್ಜಿ ಕಾಣದಾದಾಗ ಕೂಗಿ ಕರೆದರೂ ಪ್ರತಿಕ್ರಿಯೆ ಇರಲಿಲ್ಲ. ಬಳಿಕ ಮನೆಯ‌ಹೊರಗೆ ಬಂದು ನೋಡಲಾಗಿ ಹಟ್ಟಿಯ ತರಗೆಲೆ ಇದ್ದ‌ ಜಾಗದಲ್ಲಿ ಅಜ್ಜಿ ಗಾಯಗೊಂಡು ಬಿದ್ದಿರುವುದು ಕಂಡಿದ್ದರು. ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿ ಅವರು ಬಂದು ನೋಡಿ ಪುತ್ರ ಡೀಕಯ್ಯ ಅವರಿಗೆ ಮಾಹಿತಿ ನೀಡಿದ್ದರು. ಅವರು ಧಾವಿಸಿ ಬಂದು ರಕ್ತದ ಗಾಯದೊಂದಿಗೆ ಬಿದ್ದಿದ್ದ ಅಕ್ಕು ಅವರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರು ಅಸುನೀಗಿದ್ದರು.
ಮೃತ ಅಕ್ಕು
ಕುಡಿತದ ಚಟ ಕೊಲೆಗೆ ಪ್ರಚೋದಿಸಿತು;

ಅಶೋಕ ಎಳೆಯ ಪ್ರಾಯದವನಾದರೂ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ. ಕುಡಿತಕ್ಕಾಗಿ ಹಣ ಇಲ್ಲದೆ ಕೇವಲ ಇದೇ ಆಸೆಗಾಗಿ ಅಜ್ಜಿಯನ್ನು ಕೊಲೆಗೈದಿದ್ದಾನೆ. ಅಜ್ಜಿಯನ್ನು ಕಾಣಲು ಬಂದಿದ್ದ ಅಶೋಕನ್ನು ಅಜ್ಜಿ ಪ್ರೀತಿಯಿಂದ ಬರಮಾಡಿಕೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಬಂದಿದ್ದ‌ ಆತ ಬಳಿಕ ಅಜ್ಜಿ ಕೊಟ್ಟ ಊಟ ಕೂಡ ಸೇವಿಸಿದ್ದ.‌ಇದೆಲ್ಲ ಆದ‌ ಮೇಲೆ ಆಕೆಯ ಕಿವಿಯಲ್ಲಿ ಇದ್ದ ಬೆಂಡೋಲೆ ಕಸಿದುಕೊಳ್ಳುವ ಉದ್ಧೇಶದಿಂದ ಅಜ್ಜಿಯನ್ನು ದೂಡಿಹಾಕಿ ಹಲ್ಲೆ ಮಾಡಿದ್ದ.‌ ಒಮ್ಮೆಲೇ ಆದ ಘಟನೆಯಿಂದ ಗಾಯ ಮತ್ತು  ಆಘಾತಕ್ಕೊಳಗಾದ ಅಜ್ಜಿ ನೆಲಕ್ಕೆ ಬಿದ್ದಲ್ಲೇ ಸಾವನ್ನಪ್ಪಿದ್ದರು. ಇದಾದ‌ ಬಳಿಕ ಅಶೋಕ ಗೌಡ ಅಜ್ಜಿಯ ಕಿವಿಯ ಬೆಂಡೋಲೆ ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ವಿವರಿಸಿದ್ದಾನೆ. 

ಆರೋಪಿ ಸೋಮಂತಡ್ಕ ದಲ್ಲಿ ವಶಕ್ಕೆ

ಘಟನೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ಕೆಲವೇ ಘಂಟೆಗಳ ಅಂತರದಲ್ಲಿ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಆಗಿರುವ ಎಲ್ಲಾ ಘಟನೆಯನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆತನಿಗೆ ಮುಂದಿನ‌ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment