Posts

ಅಂಬೇಡ್ಕರ್ ಅವಮಾನಿಸಿದ ನ್ಯಾಯಾಧೀಶರ ವಿರುದ್ಧ ಫೆ‌.19 ರಂದು ಹೈಕೋರ್ಟ್ ಚಲೋ

1 min read

ಬೆಳ್ತಂಗಡಿ :ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಲವಂತವಾಗಿ  ತೆರವುಗೊಳಿಸಿ ಅವಮಾನಿಸುವ ಮೂಲಕ ದೇಶದ ಕೋಟ್ಯಾಂತರ ಸಂವಿಧಾನ ಪ್ರೇಮಿಗಳ ಸ್ವಾಭಿಮಾನಕ್ಕೆ ಘಾಸಿಗೊಳಿಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ (ಪಾಟೀಲ) ಎಂಬಾತನ ಮೇಲೆ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು ಎಂದು ಫೆ.19 ರಂದು ವಿಧಾನಸೌಧದ ಬಾಬಾ ಸಾಹೇಬರ ಪ್ರತಿಮೆಯವರೆಗೆ, ಹೈಕೋರ್ಟ್ ಚಲೋ ರಾಜ್ಯಮಟ್ಟದ ಬೃಹತ್ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಇದರ ತಾಲೂಕು ಪ್ರಧಾನ ಸಂಚಾಲಕ ನೇಮಿರಾಜ ಕಿಲ್ಲೂರು ಹೇಳಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಚಿಂತನಾ ಸಭೆಯಲ್ಲಿ ನಡೆದ  ಚರ್ಚೆಯಂತೆ ರಾಜ್ಯದ ಹಿರಿಯ ಚಿಂತಕರ, ಸಾಮಾಜಿಕ ಹೋರಾಟಗಾರರು ಹಿರಿಯ ಮುಖಂಡರ  ಮಾರ್ಗದರ್ಶನದಂತೆ ಕರ್ನಾಟಕದ ಎಲ್ಲಾ ಸಂವಿಧಾನಪರ ಸಂಘ ಸಂಸ್ಥೆ , ಸೇನೆ- ವೇದಿಕೆ, ಸಮಿತಿ, ಸಂಘಟನೆ, ಒಕ್ಕೂಟಗಳೆಲ್ಲಾ ಒಂದೇ ಮಹಾ ಒಕ್ಕೂಟದಡಿ ಸೇರಿ ರಾಜಧಾನಿಯಲ್ಲಿ ನಡೆಯಲಿರುವ ಐತಿಹಾಸಿಕ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳ ವಿವಿಧ ಸಂವಿಧಾನಪರ  ಸಂಘಟನೆಗಳು, ದಲಿತಪರ ಸಂಘಟನೆಗಳು, ಮಾನವಹಕ್ಕು ಸಂಘಟನೆಗಳು ಮುಂತಾದ ಸಂಘಟನೆಗಳು ಪೂರ್ಣಪ್ರಮಾಣದ ಬೆಂಬಲ ಘೋಷಿಸಿದ್ದು ಎಲ್ಲಾ ಸಂಘಟನೆಗಳೂ ಹೋರಾಟದಲ್ಲಿ ಭಾಗವಹಿಸಲಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಶಾಖೆಯ ನೇತೃತ್ವದಲ್ಲಿ ಸುಮಾರು ೫೦೦ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದರು.

ಪ್ರಕರಣದ ವಿರುದ್ಧ ಎಲ್ಲಾ ಜಿಲ್ಲೆ ತಾಲ್ಲೂಕು ಗ್ರಾಮಗ್ರಾಮಗಳಲ್ಲಿಯೂ ಪ್ರತಿಭಟನೆ ಹೋರಾಟ ಬಂದ್‌ಗಳು ನಡೆದರೂ ವಿಧಾನಸೌಧದ ಮೂಲಕ ಆಡಳಿತ ನಡೆಸುತ್ತಿರುವ ರಾಜ್ಯ,ಸರಕಾರವಾಗಲಿ  ಹೈಕೋರ್ಟ್ ಆಗಲಿ ಈ ಗಂಭೀರ ಪ್ರಕರಣದ ಬಗ್ಗೆ ಮಾತಾಡದೆ ಮೌನವಾಗಿರುವ ನಡೆಯನ್ನು ವಿಧಾನಸೌಧ ಹೈಕೋರ್ಟ್ ಮುಂದೆಯೇ ಲಕ್ಷಾಂತರ ಜನಸೇರಿ ಖಂಡಿಸೋಣ. ಸಂವಿಧಾನಾತ್ಮಕವಾಗಿ ನ್ಯಾಯ ಪಡೆಯೋಣ. ಈಗಿನಿಂದಲೇ ಸ್ವಯಂಪ್ರೇರಣೆಯಿಂದ ಲಕ್ಷೋಪಲಕ್ಷ ಸಂವಿಧಾನ ಪ್ರೇಮಿಗಳು ಆ ದಿನ ರಾಜಧಾನಿಗೆ ಹರಿದುಬರಲು ತಯಾರಿ ಮಾಡಿಕೊಳ್ಳಬೇಕಾಗಿದೆ. ಸನ್ಮಾನಕ್ಕೆ ಆಸೆಪಡದೆ ಅಪಮಾನಕ್ಕೆ ಅಂಜದೆ ಬಿಸಿಲು ಮಳೆ ಬಿರುಗಾಳಿಗಳನ್ನು ಲೆಕ್ಕಿಸದೆ ಬಾಬಾಸಾಹೇಬರ ಚಳುವಳಿಯ ಭಾಗವಾದ ಈ ರಾಜ್ಯಮಟ್ಟದ ಸಮಾವೇಶವನ್ನು ಸರ್ವರೂ ಸೇರಿ ಯಶಸ್ಸುಗೊಳಿಸಬೇಕು ಎಂದರು.

ಗೋಷ್ಠಿಯಲ್ಲಿ ಮುಖಂಡರುಗಳಾದ ಶೇಖರ್ ಕುಕ್ಕೇಡಿ, ಬಿ.ಕೆ ವಸಂತ, ಚಂದು ಎಲ್, ನಾಗರಾಜ ಲಾಯಿಲ, ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment