Posts

ಇಂದಬೆಟ್ಟು ಚಿನ್ನಾಭರಣ ಕಳವುಗೈದ ಮೂವರು ಆರೋಪಿಗಳ ಬಂಧನ ಆಲ್ಟೋ‌ ಕಾರು, ಬೈಕ್ ಸಹಿತ ಸೊತ್ತುಗಳ ವಶಕ್ಕೆ

1 min read


ಬೆಳ್ತಂಗಡಿ; ಇಂದಬೆಟ್ಟು ಗ್ರಾಮದ ದೇರಾಜೆ ಎಂಬಲ್ಲಿನ ಮುಹಮ್ಮದ್ ಅವರ ಮನೆಯಿಂದ ಹಾಡಹಗಲೇ ಕಳವುಗೈಯ್ಯಲ್ಪಟ್ಟಿದ್ದ  40 ಪವನ್ ಚಿನ್ನ ಕಳವು ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರ ತಂಡ ಹೆಡೆಮುರಿಕಟ್ಟಿದೆ.

ಬಂಧಿತರಿಂದ ಕಳವುಗೈದ ಆಭರಣಗಳು, ನಗದು, ಹಾಗೂ ಆಲ್ಟೋ ಕಾರು, ಒಂದು ಪಲ್ಸರ್ ಬೈಕ್ ಸಹಿತ ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ಟ್ ಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತರನ್ನು ನಾವೂರು ಗ್ರಾಮದ ನಿರಿಂದಿ ಮನೆ ನಿವಾಸಿ ಮುಹಮ್ಮದ್ ಸ್ವಾಲಿ(26),  ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ಯಹ್ಯಾ(32), ಮತ್ತು ನಾವೂರು ಗ್ರಾಮದ ಕಿರ್ನಡ್ಕ ಮನೆಯ ಬಿ.ಹೆಚ್ ನೌಫಲ್(27) ಎಂಬವರೆಂದು ಗುರುತಿಸಲಾಗಿದೆ.

ಮುಹಮ್ಮದ್ ಸ್ವಾಲಿ


ನೌಫಲ್

ಯಹ್ಯಾ
ಇವರಿಂದ ಘಟನೆ ನಡೆದ ದಿನ ಮನೆಯಿಂದ ಕಳವುಗೈದಿದ್ದ 12 ಲಕ್ಷ‌ ರೂ.‌ಮೌಲ್ಯದ 40 ಪವನ್ ಚಿನ್ನಾಭರಣ, 5200 ರೂ ನಗದು ಇವುಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋನಾವನೆ ಭಗವಾನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಬಂಟ್ವಾಳ ಎಎಸ್‌ಪಿ ಶಿವಾಂಶು ರಜಪೂರ್ ಅವರ ಸೂಚನೆಯಂತೆ ಪ್ರಕರಣದ ತನಿಖಾಧಿಕಾರಿಯಾದ ವೃತ್ತ ನಿರೀಕ್ಷಕ ಶಿವಕುಮಾರ್ ಬಿ, ಎಸ್.ಐ ನಂದಕುಮಾರ್, ಪ್ರೋಬೆಷನರಿ ಎಸ್.ಐ ಮೂರ್ತಿ, ಎಎಸ್‌ಐ ದೇವಪ್ಪ ಎಂ‌.ಕೆ, ಸಿಬ್ಬಂದಿಗಳಾದ ಲಾರೆನ್ಸ್, ರಾಜೇಶ್ ಎನ್, ವೃಷಭ, ಪ್ರಮೋದ್ ನಾಯ್ಕ, ಇಬ್ರಾಹಿಂ ಗರ್ಡಾಡಿ, ಲತೀಫ್, ವಿಜಯ ಕುಮಾರ್ ರೈ, ವೆಂಕಟೇಶ್, ಬಸವರಾಜ್,ಚರಣ್, ಅವಿನಾಶ್, ವಾಹನ ಚಾಲಕ ಮುಹಮ್ಮದ್ ಆಸಿಫ್, ಸತೀಶ್,ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್, ಇವರು ತೊಡಗಿಸಿಕೊಂಡಿದ್ದರು.

ಪ್ರಕರಣವನ್ನು ತ್ವರಿತವಾಗಿ ಪತ್ತೆಹಚ್ಚುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ಎಸ್.ಪಿ ಅವರು ಬಹುಮಾನ ಘೋಷಿಸುವ ಭರವಸೆ ನೀಡಿದ್ದಾರೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment