Posts

ನಾಲ್ಕನೇ ತರಗತಿಯ ಬಾಲಕಿಗೆ ಅತ್ಯಾಚಾರ ನಡಸಿದ ಆರೋಪಿ ಸೆರೆ

1 min read


ಬೆಳ್ತಂಗಡಿ ತಾಲೂಕಿನ ಕೊಯ್ಯೂರಿನಲ್ಲಿ‌ ಘಟನೆ



ಬೆಳ್ತಂಗಡಿ; 9 ವರ್ಷ ಪ್ರಾಯದ ಹೊಸ್ತಿಲಲ್ಲಿರುವ ನಾಲ್ಕನೇ ತರಗತಿಯ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರ ನಡೆಸಿದ ವಿಲಕ್ಷಣಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದಿಂದ ವರದಿಯಾಗಿದೆ‌. 

ಪ್ರಕರಣದ ಆರೋಪಿ ಜಯಾನಂದ ಎಂಬಾತನನ್ನು ಇದೀಗ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. 

ಈತ ಸ್ಥಳೀಯ ಪುಟ್ಟ ಬಾಲೆಯನ್ನು ನಿರ್ಮಾಣಹಂತದಲ್ಲಿರುವ ಮನೆಗೆ ಕರೆದೊಯ್ದು ಬೆದರಿಸಿ ತನ್ನ ಮೊಬೈಲ್‌ ನಲ್ಲಿದ್ದ ನೀಲಿ ಚಿತ್ರಗಳನ್ನು ತೋರಿಸಿದ್ದಾನೆ. ಈ ವೇಳೆ ಭಯಗೊಂಡ ಆಕೆಯನ್ನು ಈತ ಬೆದರಿಸಿ ಈ ವಿಷಯ ಯಾರಲ್ಲಾದರೂ ಹೇಳಿದರೆ ಕೊಂಡು ಬಿಡುವುದಾಗಿ ಜೀವ ಬೆದರಿಕೆಯನ್ನೂ ಒಡ್ಡಿದ್ದಾನೆ. ಇದಾದ ಮೇಳೆ ಬಾಲಕಿಯನ್ನು ಏಣಿಯ ರೇಕ್‌ನ ಮೇಲೆ ಮಲಗಿಸಿ ಸಂಭೋಗಿಸಿರುವುದಾಗಿ ಆರಂಭಿಕ ತನಿಖೆಯಿಂದ ಗೊತ್ತಾಗಿದೆ. 

ಭಯ ಮತ್ತು ವಿಚಲಿತಗೊಂಡ ಬಾಲೆ ವಿಷಯವನ್ನು ಮನೆಯವರಿಗೆ ತಿಳಿಸಿದ್ದು ಅಂತೆಯೇ ಅವರು ಹೆತ್ತವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಆರೋಪಿ ಜಯಾನಂದನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನ ಮೇಲೆ ಹಿಂದೆಯೂ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪಗಳಿವೆ ಎನ್ನಲಾಗಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment