ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ವತಿಯಿಂದ ನಡೆದ ಈ ತರಬೇತಿಗೆ ಬೆಳಾಲು ಸೇವಾ ಸಹಕಾರ ಸಂಘ ಸಹಯೋಗ ನೀಡಿತು.
ತೋಟಗಾರಿಕಾ ಇಲಾಖೆಯಿಂದ ಬೆಳಾಲಿನ 67 ಆಸಕ್ತ ಜೇನು ಕೃಷಿಕರಿಗೆ ಪೆಟ್ಟಿಗೆಯನ್ನು ಮತ್ತು ಜೇನುಕುಟುಂಬ ಸಹಿತವಾಗಿ ನೀಡಲಾಗಿತ್ತು. ಇದಲ್ಲದೆ ಈ ಮೊದಲೇ ಸುಮಾರು 50 ಕ್ಕಿಂತಲೂ ಅಧಿಕ ಜೇನು ಪೆಟ್ಟಿಗೆಗಳು ಬೆಳಾಲಿನಲ್ಲಿದ್ದು ಇವರೆಲ್ಲರಿಗೆ ಸೂಕ್ತ ತರಬೇತಿ ಯ ಆವಶ್ಯಕತೆ ಅರಿತು ಶಿಬಿರ ಆಯೋಜಿಸಲಾಗಿತ್ತು.
ಶಿಬಿರವನ್ನು ಕೊಕ್ಕಡ ತಾ. ಪಂ. ಸದಸ್ಯ ಲಕ್ಷ್ಮೀನಾರಾಯಣ ಉದ್ಘಾಟಿಸಿದರು. ಸಹಕಾರ ಸಂಘದ ಅಧ್ಯಕ್ಷ ಹೆಚ್. ಪದ್ಮ ಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂಜೀವ, ತೋಟಗಾರಿಕೆ ಹಿರಿಯ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ಸಹಕಾರ ಸಂಘದ ಮ್ಯಾನೇಜರ್ ನಾರಾಯಣ ಗೌಡ ಅತಿಥಿಗಳಾಗಿದ್ದರು.
ತಾಲೂಕಿನ ಹಿರಿಯ ಜೇನು ತರಬೇತಿದಾರರಾದ ಶ್ರೀ ಶ್ಯಾಮ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು..
ಎರಡನೇ ದಿನ ಸುಲೈಮಾನ್ ಭೀಮಂಡೆ ಯವರ ಮನೆಯಲ್ಲಿ ಪ್ರಾಕ್ಟಿಕಲ್ ತರಬೇತಿ ನಡೆಯಿತು. ಧರ್ಮಸ್ಥಳ ಜಿ.ಪಂ. ಸದಸ್ಯ ಕೆ ಕೊರಗಪ್ಪ ನಾಯ್ಕ ಉಪಸ್ಥಿತರಿದ್ದರು. 45 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು.