Posts

ಅಂಚೆ ಇಲಾಖೆ ಸೇವೆಯಿಂದ ನಿವೃತರಾದ ಕೃಷ್ಣಪ್ಪ ಪೂಜಾರಿ ಅವರಿಗೆ ಮುಂಡಾಜೆ ಮಸ್ಜಿದ್ ನಲ್ಲಿ ಗೌರವಾರ್ಪಣೆ

1 min read

 


ಬೆಳ್ತಂಗಡಿ; ಮುಂಡಾಜೆ‌ ಗ್ರಾಮದಲ್ಲಿ ಅಂಚೆ ಇಲಾಖೆಯಲ್ಲಿ ಡಾಕ್‌ಸೇವಾ ನೈಲ್ ಡೆಲಿವರರ್ ಹುದ್ದೆಯಲ್ಲಿ  ಸುದೀರ್ಘ 42 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಸದಾ ಮುಗುಳ್ನಗೆಯಿಂದ ಸೇವೆಗೆಯ್ದು ಸರ್ವರ ಮನಸ್ಸು ಗೆದ್ದ ಕೃಷ್ಣಪ್ಪ ಪೂಜಾರಿಯವರಿಗೆ ಬದ್ರಿಯಾ ಜುಮಾ ಮಸ್ಜಿದ್ ಮುಂಡಾಜೆ (ಬಿಜೆಎಮ್) ವತಿಯಿಂದ ಜ.22 ರಂದು ಮದರಸ ಸಭಾಂಗಣದಲ್ಲಿ‌ ಸರ್ವ ಜಮಾಅತ್ ಬಾಂಧವರ ಸಮ್ಮುಖ ಅಭಿನಂದಿಸಲಾಯಿತು.

ಮಸೀದಿಯ ಖತೀಬ್ ಅಬ್ದುಲ್ ಹಮೀದ್ ದಾರಿಮಿಯವರು ಕೃಷ್ಣಪ್ಪ‌ ಪೂಜಾರಿ‌ ಅವರನ್ನು ಶಾಲು ಹೊದಿಸಿ ಸಮ್ಮಾನಿಸಿದರು.  ಜಮಾತ್ ಆಡಳಿತ ಸಮಿತಿ ಅಧ್ಯಕ್ಷ  ರಜಾಕ್ ಹಾಜಿ ಬಿಎಮ್‌ಎ ಉಡುಗೊರೆಕೊಟ್ಟು ಗೌರವಿಸಿದರು.


ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷ ಉಸ್ಮಾನ್ ಹಾಜಿ ಕಲ್ಲಾಜೆ, ಕಾರ್ಯದರ್ಶಿ ಅಬ್ಬಾಸ್ ಕಸಿಮಾವು, ಮಾಜಿ ಖತೀಬ್ ಅಹ್ಮದ್ ದಾರಿಮಿ, ಉಸ್ಮಾನ್ ಹಾಜಿ, ಹಮೀದ್ ಕೆಎಸ್‌ಆರ್‌ಟಿಸಿ, ಇಸ್‌ಹಾಕ್ ಯು.ಎ, ಅಯ್ಯುಬ್ ಕಲ್ಲಾಜೆ, ಇಸ್ಮಾಯಿಲ್,  ಅಬ್ದುಲ್ಲಾ, ಇಬ್ರಾಹಿಂ ಮಸೀದಿಬಳಿ ಹಾಗೂ ಜಾಮಾತ್ ಸದಸ್ಯರು ಪಾಲ್ಗೊಂಡಿದ್ದರು.

ಅಭಿನಂದನೆ ಸ್ವೀಕರಿಸಿ ಕೃಷ್ಣಪ್ಪ ಪೂಜಾರಿ ಅವರು ಜಮಾಅತ್ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. 


ಅಶ್ವೀರ್ ಸೋಮಂತಡ್ಕ ಕಾರ್ಯಕ್ರಮ ನಿರೂಪಿಸಿದರು


ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment