Posts

ಎಲ್ಲರೂ ಸ್ವಾರ್ಥರಹಿತವಾಗಿ‌ ಮಾಡುತ್ತಿರುವ ಸೇವೆಯಿಂದಾಗಿ ಸಮಾಜ ನಿರಾಳವಾಗಿ ಮುನ್ನಡೆಯುತ್ತಿದೆ; ಶ್ರೀಧರ ಜಿ ಭಿಡೆ |||ಕರ್ನಾಟಕ ಮುಸ್ಲಿಂ‌ ಜಮಾಅತ್ ವತಿಯಿಂದ ಸಾಧಕರಿಗೆ, ನಿವೃತ್ತರಿಗೆ, ವಾರಿಯರ್ಸ್‌ಗೆ ಸನ್ಮಾನ

1 min read

ಬೆಳ್ತಂಗಡಿ; ಸಮಾಜದಲ್ಲಿ ಎಲ್ಲ ಕೆಲಸಗಳೂ ಸರಕಾರ ಮಾಡುತ್ತವೆಯೆಂದಲ್ಲ. ಸೇವಾ ಮನೋಭಾವನೆ ಇರುವವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಾಡುತ್ತಿರುವ ಸೇವೆಗಳೇ ಈ ಸಮಾಜದ ನಿರಾಳತೆಗೆ ಕಾರಣ ಎಂಬುದೂ ಅಷ್ಟೇ ಸತ್ಯ ಎಂದು ಗಾಂಧಿ ವಿಚಾರ ವೇದಿಕೆ ಸಂಸ್ಥಾಪಕ, ಹಿರಿಯ ಸಹಕಾರಿ ಶ್ರೀಧರ ಜಿ ಭಿಡೆ ಹೇಳಿದರು.

ಭಾರತ ರಾಷ್ಟ್ರದ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಮುಸ್ಲಿಂ ಜಮಾಅತ್ ಉಜಿರೆ ಬ್ಲಾಕ್ ಸಮಿತಿ‌ಯಿಂದ ಹಮ್ಮಿಕೊಂಡಿದ್ದ ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ, ಉಜಿರೆ- ಕಲ್ಮಂಜ- ಮುಂಡಾಜೆ- ಚಾರ್ಮಾಡಿ ಮತ್ತು ನೆರಿಯ ಗ್ರಾಮ ಸಮಿತಿಗಳ ವತಿಯಿಂದ ಹಮ್ಮಿಕೊಂಡಿದ್ದ, ಸರಕಾರಿ ಸೇವೆಗೈದು ನಿವೃತ್ತರಾದವರಿಗೆ, ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ,

ಅವರು ಮಾತನಾಡುತ್ತಿದ್ದರು.

ಮುಂಡಾಜೆ ಜಮಲುಲ್ಲೈಲಿ ಸುನ್ನೀ ಜುಮ್ಮಾ ಮಸ್ಜಿದ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷ ಪಿ ಮುಹಮ್ಮದ್ ನೆರಿಯ ವಹಿಸಿದ್ದರು.

ಕರ್ನಾಟಕ ಮುಸ್ಲಿಂ‌ ಜಮಾಅತ್ ರಾಜ್ಯ ಸಮಿತಿ ಸದಸ್ಯ ಸಾದಿಕ್ ಮಾಸ್ಟರ್ ಅಭಿನಂದನಾ ಭಾಷಣ ಮಾಡಿದರು.ತಾ.‌ಅಧ್ಯಕ್ಷ ಎಸ್ ಎಂ ತಂಙಳ್ ಪ್ರಸ್ತಾವನೆಗೈದರು. ತಾ. ಕೋಶಾಧಿಕಾರಿ ಎ.ಕೆ ಅಹಮ್ಮದ್, ಗ್ರಾಮ ಸಮಿತಿ ಅಧ್ಯಕ್ಷರುಗಳಾದ ಇಬ್ರಾಹಿಂ ಹಾಜಿ ಅತ್ತಾಜೆ ಉಜಿರೆ, ಬಿ.ಎನ್ ಹಮೀದ್ ಕಲ್ಮಂಜ, ಶಬೀರ್ ಬಿ.ಕೆ.ಹೆಚ್ ಮುಂಡಾಜೆ, ಮುಹಮ್ಮದ್ ಪಾದೆ ಚಾರ್ಮಾಡಿ ಮತ್ತು ಯಾಕೂಬ್ ಸಿಲ್‌ಸಿಲಾ ನೆರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ; ಗೌರವಾರ್ಪಣೆ;

ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಕೋವಿಡ್ ವಾರಿಯರ್ಸ್ ಗಳಾದ ಹಸನಬ್ಬ ಚಾರ್ಮಾಡಿ, ಸರೋಜಾ ನೆರಿಯ, ಸಿಂಧು ಅಜಿತ್‌ಕುಮಾರ್, ಅಯೋಬ್ ಆಲಿಕುಂಞಿ ಮುಂಡಾಜೆ, ಪಿ.ಸಿ ಸೆಬಾಸ್ಟಿಯನ್, ಮುಬೀನ್ ಉಜಿರೆ ಮತ್ತು ಅಶ್ರಫ್ ಚಾರ್ಮಾಡಿ ಅವರನ್ನು ಸನ್ಮಾನಿಸಲಾಯಿತು.

ಉಜಿರೆ ಗ್ರಾಮ‌ ಸಮಿತಿ ವತಿಯಿಂದ ಶ್ರೀಧರ ಕೆ.ವಿ (ಆರೋಗ್ಯ), ಸುಲೈಮಾನ್ ಭೀಮಂಡೆ (ಕೃಷಿ) ರವೂಫ್ ಅತ್ತಾಜೆ (ಸಂಘಟನೆ), ನೆರಿಯ ಗ್ರಾಮ ಸಮಿತಿ ವತಿಯಿಂದ ರಶೀದ್ ಬಲಿಪಾಯ(ಸಂಘಟನೆ), ಯು.ಸಿ ಪೌಲೋಸ್ ಗಂಡಿಬಾಗಿಲು(ಸಮಾಜ‌ಸೇವೆ), ಕು.‌ಜಯಶ್ರೀ ಪಿಲಿಕಲ ( ಶೈಕ್ಷಣಿಕ ಸಾಧನೆ), ಕಲ್ಮಂಜ ಗ್ರಾಮ‌ ಸಮಿತಿ ವತಿಯಿಂದ ಕೃಷ್ಣಪ್ಪ ಗುಡಿಗಾರ ಅಲೆಕ್ಕಿ(ಸಮಾಜ ಸೇವೆ), ಮುಜೀಬ್ ಸಾಹೇಬ್(ಉದ್ಯಮ), ಕೃಷ್ಣಪ್ಪ ನಿಡಿಗಲ್(ಸರಕಾರಿ ಸೇವೆ), ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಈಶ್ವರ(ಹೈನುಗಾರಿಕೆ), ಹಾಜಿ ಹಮೀದ್ ಕಲ್ಲಾಜೆ(ಸರಕಾರಿ ಸೇವೆ), ಬದ್ರುದ್ದೀನ್(ಹಿರಿಯ ಚಾಲಕ), ಮತ್ತು ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಡಿ.ಎ ರಹಿಮಾನ್ (ಸಮಾಜ ಸೇವೆ), ಅಬ್ರಹಾಂ ಎಂ.ಕೆ (ದೇಶ ಸೇವೆ), ಕೆ.ವಿ ಕಮಲಾಕ್ಷಿ (ಶೈಕ್ಷಣಿಕ ಸೇವೆ) ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಉಜಿರೆ ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಯು ಸ್ವಾಗತಿಸಿದರು. ಸನ್ಮಾನಿತರ ಪರವಾಗಿ ಹಸನಬ್ಬ ಚಾರ್ಮಾಡಿ, ಶ್ರೀಧರ ಕೆ.ವಿ, ಡಿ.ಎ ರಹಿಮಾನ್ ಮತ್ತು ಯು.ಸಿ ಪೌಲೋಸ್ ಅನಿಸಿಕೆ ವ್ಯಕ್ತಪಡಿಸಿದರು. ಮುಸ್ಲಿಂ ಜಮಾಅತ್ ತಾ. ಮಾಧ್ಯಮ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು. ಬ್ಲಾಕ್ ಮತ್ತು ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

You may like these posts

Post a Comment