ಬೆಳ್ತಂಗಡಿ; ಮುಂಡಾಜೆ ಗ್ರಾಮದ ದೇವಸ್ಯ ನಿವಾಸಿ, ಹಿರಿಯ ಅನುಭವಿ ಮೂರ್ತೆದಾರ ಅಣ್ಣು ಪೂಜಾರಿ ದೇವಸ್ಯ(92ವ.) ಅವರು ಇತ್ತೀಚೆಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೂರ್ತೆದಾರಿಕೆ ಜೊತೆಗೆ ಅವರು ಕೃಷಿಕೂಲಿ ಕಾರ್ಮಿಕರಾಗಿಯೂ ಜನಜನಿತರಾಗಿದ್ದರು.
ಮೃತರು ಪತ್ನಿ ಕಲ್ಯಾಣಿ, ಮೂವರು ಗಂಡು ಮಕ್ಕಳಾದ ಹೊನ್ನಪ್ಪ, ಸಾಂತಪ್ಪ ಮತ್ತು ವಾಸು, ಓರ್ವೆ ಪುತ್ರಿ ಜಯಂತಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.