Posts

ನಗರ ಬ್ಲಾಕ್ ಕಾಂಗ್ರೆಸ್‌ನ 'ಮಾಜಿ ಸೈನಿಕರ ಘಟಕದ" ಅಧ್ಯಕ್ಷರಾಗಿ ಮುಹಮ್ಮದ್ ರಫಿ ನೇಮಕ

1 min read

ಬೆಳ್ತಂಗಡಿ; ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ಬ್ಲಾಕ್ ವತಿಯಿಂದ ಪಕ್ಷ ಸಂಘಟನೆ ಉದ್ದೇಶದಿಂದ ವಿವಿಧ ಘಟಕಗಳನ್ನು ರಚಿಸುತ್ತಿದ್ದು, ಬ್ಲಾಕ್ ಕಾಂಗ್ರೆಸ್ ನಗರ ಇದರ 'ಮಾಜಿ ಸೈನಿಕರ ಘಟಕ'ದ ಅಧ್ಯಕ್ಷರಾಗಿ ಮುಹಮ್ಮದ್ ರಫಿ ಇವರು ನೇಮಕಗೊಂಡಿದ್ದಾರೆ.

ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಕೆ ಗಂಗಾಧರ ಗೌಡ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಅವರ ಶಿಫಾರಸ್ಸಿನಂತೆ ಮುಹಮ್ಮದ್ ರಫಿ ಅವರನ್ನು ಸದ್ರಿ ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಎಂಎಲ್‌ಸಿ ಹರೀಶ್ ಕುಮಾರ್ ಆದೇಶ ನೀಡಿದ್ದಾರೆ.

ಸಂಘಟಕರಾಗಿರುವ ಮುಹಮ್ಮದ್ ರಫಿ ಅವರು ಬೆಳ್ಳಾರೆ ಝಕರಿಯಾ ಜುಮ್ಮಾ ಮಸ್ಜಿದ್, ಕಚ್ ಮೆಮನ್ ಮಸ್ಜಿದ್ ಬಂದರ್ ಮಂಗಳೂರು ಇದರ ಆಡಳಿತಾಧಿಕಾರಿಯಾಗಿ,  ಬೆಳ್ತಂಗಡಿ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾಗಿ, ತಾಲೂಕು ಮುಸ್ಲಿಂ ಜಮಾಅತ್ ಪ್ರ.ಕಾರ್ಯದರ್ಶಿಯಾಗಿ, ಗೌಸಿಯಾ ಜಾಮಿಯಾ ಮಸ್ಜಿದ್ ಅಧ್ಯಕ್ಷರಾಗಿ, ಸೇವೆ ಸಲ್ಲಿಸುತ್ತಿದ್ದಾರೆ. 

ತಾಲೂಕು ಮಾಜಿ‌ ಸೈನಿಕರ ಸಂಘದ ಮಾಜಿ‌ ಅಧ್ಯಕ್ಷ ಹಾಗೂ ಹಾಲಿ ಪ್ರ. ಕಾರ್ಯದರ್ಶಿಯಾಗಿ, ಕಾಜೂರು ದರ್ಗಾಸಮಿತಿ ಮಾಜಿ ಆಡಳಿತಾಧಿಯಾಗಿಯೂ ಸೇವಾ ಕಾರ್ಯಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment