ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಮತ್ತು ಗ್ರಾಮ ಸಮಿತಿ ಜಂಟಿ ಆಶ್ರಯದಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ಇಂಡಿಯೋತ್ಸವ@75 ಕಾರ್ಯಕ್ರಮದ ಅಂಗವಾಗಿ ಕೊರೊನಾ ವಾರಿಯರ್ಸ್, ವಿವಿಧ ಕ್ಷೇತ್ರದ ಸಾಧಕರು ಮತ್ತು ನಿವೃತ ಸರಕಾರಿ ಉದ್ಯೋಗಿಗಳಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಮದ್ದಡ್ಕ ನೂರುಲ್ ಹುದಾ ಸಭಾಂಗಣದಲ್ಲಿ ಜರುಗಿತು.
ಕುವೆಟ್ಟು ಬ್ಲಾಕ್ ಸಮಿತಿ ಅಧ್ಯಕ್ಷ ಉಸ್ಮಾನ್ ಹಾಜಿ ಆಲಂದಿಲ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆಯನ್ನು ಮದ್ದಡ್ಕ ನೂರುಲ್ ಹುದಾ ಮಸ್ಜಿದ್ ಖತೀಬ್ ರಫೀಕ್ ಅಹ್ಸನಿ ನೆರವೇರಿಸಿದರು.
ಮುಸ್ಲಿಂ ಜಮಾಅತ್ ತಾ. ಅಧ್ಯಕ್ಷ ಎಸ್.ಎಂ ತಂಙಳ್ ಉಜಿರೆ, ಡಿಸಿಸಿ ಬ್ಯಾಂಕ್ ಅಳದಂಗಡಿ ಶಾಖಾಧಿಕಾರಿ ಕೆ ಚಂದ್ರಹಾಸ ಕೇದೆ, ಕೆಎಮ್ಜೆ ತಾ. ಕೋಶಾಧಿಕಾರಿ ಎ.ಕೆ ಅಹ್ಮದ್, ಕುವೆಟ್ಟು ಬ್ಲಾಕ್ ಸಮಿತಿ ಕೋಶಾಧಿಕಾರಿ ಅಬ್ದುಲ್ ಕರೀಂ ಗೇರುಕಟ್ಟೆ, ಮದ್ದಡ್ಕ ಮಸೀದಿ ಅಧ್ಯಕ್ಷ ಹೆಚ್.ಎಂ ಹಸನಬ್ಬ ಮದ್ದಡ್ಕ, ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ಮುಹಮ್ಮದ್ ಸಾಲಿ ಇವರು ಮುಖ್ಯ ಅತಿಥಿಯಾಗಿದ್ದರು.
ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯ ಎಂಬಿಎಮ್ ಸಾದಿಕ್ ಮಾಸ್ಟರ್ ಮಲೆಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ವಾಂಸ ಯಾಕೂಬ್ ಮುಸ್ಲಿಯಾರ್ ಪಣಕಜೆ ದುಆ ನೆರವೇರಿಸಿದರು. ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ನಿಝಾಮ್ ಪಣಕಜೆ ನಿರೂಪಿಸಿ ಸ್ವಾಗತಿಸಿದರು.ಕೆಎಮ್ಜೆ ಕುವೆಟ್ಟು ಗ್ರಾಮ ಸಮಿತಿ ಕಾರ್ಯದರ್ಶಿ ಅಸ್ಲಂ ನೇರಳಕಟ್ಟೆ ಧನ್ಯವಾದವಿತ್ತರು.
ಸಾಧಕರಿಗೆ ಸನ್ಮಾನ:
ಮುಸ್ಲಿಂ ಜಮಾಅತ್ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಸೇವೆ ನೀಡಿದ ಅಬ್ಬೋನು ಮದ್ದಡ್ಕ, ಜಮಾಲುದ್ದೀನ್ ಲೆತೀಫಿ, ಅಬ್ದುಲ್ ರಶೀದ್ ಮಡಂತ್ಯಾರು, ಸಿದ್ದೀಕ್ ಪರಪ್ಪು, ಮುಸ್ತಫಾ ಗುರುವಾಯನಕೆರೆ, ನಿಝಾಮ್ ಗೇರುಕಟ್ಟೆ ಮತ್ತು ನಾಸಿರ್ ಗುರುವಾಯನಕೆರೆ ಇವರನ್ನು ಗೌರವಿಸಲಾದರೆ, ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸರಕಾರಿ ಸೇವೆಯಲ್ಲಿ ನಿವೃತ್ತರಾದ ಮೆಸ್ಕಾಂ ಇಲಾಖೆಯ ಪವರ್ಮೆನ್ಗಳಾಗಿದ್ದ ಎಸ್ ಮೊಯಿದಿನಬ್ಬ ಸಬರಬೈಲು ಮತ್ತು ಅಬ್ಬಾಸ್ (ಹಾಜಬ್ಬ) ಸಬರಬೈಲು, ತಾಲೂಕು ಕಚೇರಿಯ ನಿವೃತ್ತ ನೌಕರ ತಮ್ಮಯ್ಯ ಪಾದೆ, ಕೆಎಸ್ಆರ್ಟಿಸಿ ನಿವೃತ್ತ ನೌಕರ ಹಾಜಿ ಯೂಸುಫ್, ಕಬಡ್ಡಿ ಕ್ಷೇತ್ರದ ಸಾಧಕರಾದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಸೀದ್ ಪಾದೆ, ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾ ಪ್ರತಿಭೆಗಳಾದ ಮುಹಮ್ಮದ್ ಹಾಸಿರ್ ಮತ್ತು ಶಿಹಾಬುದ್ದೀನ್ ತಬ್ಸೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮುಸ್ಲಿಂ ಜಮಾಅತ್ ತಾಲೂಕು ಸಂಘಟಕ ಅಶ್ರಫ್ ಆಲಿಕುಂಞಿ ಮುಂಡಾಜೆ ಅಭಿನಂದನಾ ಭಾಷಣ ಮಾಡಿದರು.