ಬೆಳ್ತಂಗಡಿ; ಕೋವಿಡ್ 19 ಮಾರಕ ರೋಗದಿಂದ ಸ್ಥಗಿತಗೊಂಡಿದ್ದ ಶಾಲೆಯು ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದ್ದು, ಅ ನಿಟ್ಟಿನಲ್ಲಿ ಗುರುವಾಯನಕೆರೆ ಪಿಲಿಚಂಡಿಕಲ್ಲು ಸರಕಾರಿ ಶಾಲಾ ಆವರಣವು ಸಂಪೂರ್ಣ ಪೊದೆಗಳಿಂದ ಮಲಿನವಾಗಿದ್ದುದನ್ನು ಮನಗಂಡ ಎಸ್ ಡಿಪಿಐ ಕುವೆಟ್ಟು ಗ್ರಾಮ ಸಮಿತಿ ವತಿಯಿಂದ ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿ.ಕೆ ,ಸಮೀರ್ ಎಸ್ ಕೆ, ಎಸ್ ಡಿ ಪಿ ಐ ಕುವೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ದಾವೂದ್ ಜಿ.ಕೆ, ಕಾರ್ಯದರ್ಶಿ ಕಲಂದರ್ ಬಿ ಎಚ್,ಉಪಾದ್ಯಕ್ಷರಾದ ಅಶ್ರಪ್ ಎಸ್ ಕೆ ,ಎಸ್ ಡಿ ಪಿ ಐ ಸುನ್ನತುಕೆರೆ ವಾರ್ಡ್ ಅಧ್ಯಕ್ಷರಾದ ಇಸಾಕ್ ಪಿ ಎಸ್ ಕೆ , ಕಾರ್ಯದರ್ಶಿ ಖಲಂದರ್ ಅಂಗಡಿ, ಕೋಶಾಧಿಕಾರಿ ಅಲ್ತಾಫ್ ಎಸ್ ಕೆ ಹಾಗೂ ಎಸ್ ಡಿ ಪಿ ಐ ಕಾರ್ಯಕರ್ತರು ಹಿತೈಷಿಗಳು ಉಪಸ್ಥಿತರಿದ್ದರು.
ಈ ಒಂದು ಶ್ರಮದಾನಕ್ಕೆ ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ಹಕೀಮ್ ಸುನ್ನತ್ ಕೆರೆ ಹಾಗು ಶಾಲಾ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದರು.