Posts

ಇಂಡಿಯೋತ್ಸವ ಪ್ರಯುಕ್ತ ಕರ್ನಾಟಕ ಮುಸ್ಲಿಂ ಜಮಾಅತ್ ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿಯಿಂದ ಸಾಧಕರಿಗೆ ಸನ್ಮಾನ

1 min read

ಬೆಳ್ತಂಗಡಿ; ಕರ್ನಾಟಕ ಮುಸ್ಲಿಂ ಜಮಾಅತ್ ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿ ವತಿಯಿಂದ "ಇಂಡಿಯೋತ್ಸವ @ 75" ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಆದಿತ್ಯವಾರ ಕುಕ್ಕೇಡಿ ಗ್ರಾ.ಪಂ ಸಭಾಂಗಣದಲ್ಲಿ ಜರುಗಿತು.

ಸಂಘಟನೆಯ ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿ ಅಧ್ಯಕ್ಷ ಇಸಾಕ್.ಜಿ ಅಧ್ಯಕ್ಷತೆ ವಹಿಸಿದ್ದರು.



ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಉಪಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್‌ ದುಃಅ ನೆರವೇರಿಸಿದರು.

ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಪೂಜಾರಿ  ಉದ್ಘಾಟಿಸಿದರು.

ರಾಜ್ಯ ಸಮಿತಿ ನಿರ್ದೇಶನದಂತೆ ಭಾರತೀಯ ಸೇನೆಯ ನಿವೃತ್ತ ಯೋಧ ಸುನೀಲ್ ರಾಜ್ ಹಾಗೂ  2021 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಪಾತ್ರರಾದ  ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಉಸ್ಮಾನ್ ಗರ್ಡಾಡಿ ಯವರ ದಕ್ಷ ಸೇವೆ ಗುರುತಿಸಿ ಸನ್ಮಾನಿಸಲಾಯಿತು.ಸಂದೇಶ ಭಾಷಣ ಮಾಡಿದಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಎಂ.ಬಿ.ಎಂ ಸಾದಿಕ್ ಮಲೆಬೆಟ್ಟು, ಜಾತ್ಯಾತೀತವಾಗಿ ಗೆದ್ದ‌ಭಾರತದ ಸ್ವಾತಂತ್ರ್ಯದ ಸೊಬಗನ್ನು ಜಾತ್ಯಾತೀತವಾಗಿಯೇ ಆಚರಿಸುವುದು ನಮ್ಮ ಸಂಘಟನೆಯ ಉದ್ಧೇಶವಾಗಿದೆ ಎಂದರು. ಅತಿಥಿ ಭಾಷಣ ಮಾಡಿದ

ಜಿ. ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಸಂಘಟನೆಯ ಮೂಲಕ ಮುಸ್ಲಿಂ ಸಮಾಜದಲ್ಲಿ ಜಾಗೃತಿ, ರಾಜಕೀಯ ಅರಿವು ಮೂಡಿಸುವ ಕಾರ್ಯಗಳು ಆಗಬೇಕು. ಆ ಮೂಲಕ ಸಮುದಾಯವನ್ನು ಸದೃಢತೆಗೆ ತರುವಂತಾಗಬೇಕು ಎಂದರು.

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್.ಎಂ ತಂಙಳ್ ಉಜಿರೆ,  ಕುಂಡದಬೆಟ್ಟು ಜುಮಾ ಮಸ್ಜಿದ್ ಖತೀಬ್ ಹನೀಫ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಅಳದಂಗಡಿ ಬ್ಲಾಕ್ ಅಧ್ಯಕ್ಷ ಮುತ್ತಲಿಬ್ ಶುಭಹಾರೈಸಿದರು.

ವೇಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಕುಕ್ಕೇಡಿ ಪಂಚಾಯತ್ ಅಧಿಕಾರಿ ನವೀನ್, ಉಳ್ತೂರು ಮಸ್ಜಿದ್ ಖತೀಬ್ ಮುಹಮ್ಮದ್ ಖಾಮಿಲ್ ಸಖಾಫಿ ಅಲ್- ಫುರ್ಖಾನಿ, ಗೋಳಿಯಂಗಡಿ ಮಸ್ಜಿದ್ ಖತೀಬ್ ಇಬ್ರಾಹೀಂ ಮದನಿ, ಕರ್ನಾಟಕ ಮುಸ್ಲಿಂ ಜಮಾಅತ್ ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿ ಸಂಘಟನಾ ಕಾರ್ಯದರ್ಶಿ ಫಯಾಝ್ ಮುಈನಿ, ಕೋಶಾಧಿಕಾರಿ ಅಶ್ರಫ್ ಅಸರ್, ಅಳದಂಗಡಿ ಬ್ಲಾಕ್ ಪ್ರ.ಕಾರ್ಯದರ್ಶಿ ತಲ್‌ಹತ್ ಎಂ.ಜಿ, ಉಸ್ತುವಾರಿ ಇಸ್ಮಾಯಿಲ್, ನಾಸಿರ್ ಪಡ್ಡಂದಡ್ಕ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕುಕ್ಕೇಡಿ- ನಿಟ್ಟಡೆ ಗ್ರಾಮ ಸಮಿತಿ ಪ್ರ.ಕಾರ್ಯದರ್ಶಿ ಹಸೈನಾರ್ ಸ್ವಾಗತಿಸಿ, ಅಬೂಬಕ್ಕರ್ ಸಿದ್ದೀಕ್ ಧನ್ಯವಾದವಿತ್ತರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment