ಬೆಳ್ತಂಗಡಿ; ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಫ್ಯಾಮಿಲಿ ಆಪೋಸ್ತಲೇಟ್ ಹಾಗೂ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ ನವದೆಹಲಿ ಹಾಗೂ ಅಮಲ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತ್ರಿಶೂರ್ ಇವರ ಸಹಕಾರದೊಂದಿಗೆ 'ಸಾಂತ್ವನಂ ಕೇಶದಾನ' ಕಾರ್ಯಕ್ರಮವು ಶನಿವಾರ ಬೆಳ್ತಂಗಡಿ ಜ್ಞಾನ ನಿಲಯದಲ್ಲಿ ನಡೆಯಿತು.
ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನ ನಿಲಯದ ನಿರ್ದೇಶಕ ಫಾ. ಜೋಸೆಫ್ ಮಟ್ಟಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಸಮಾಜ ಕಾರ್ಯ ವಿದ್ಯಾರ್ಥಿ ಫಾ. ಅಥಿನ್ ತೋಮಸ್ ಕೇಶದಾನದ ಮಹತ್ವ ಹಾಗೂ ಅಗತ್ಯದ ಬಗ್ಗೆ ವಿವರಿಸಿದರು.
ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ.ಜೆ. ಸ್ವಾಗತಿಸಿದರು. ಕೇಶದಾನಿಗಳ ಪರವಾಗಿ ಸಿ. ಲಿನ್ಸಿ ಎಸ್. ಹೆಚ್ ಹಾಗೂ ಮರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಫ್ಯಾಮಿಲಿ ಆಪೋಸ್ತಲೇಟ್ ನಿರ್ದೇಶಕ ಫಾ. ಜೋಸೆಫ್ ಚೀರನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬ್ರದರ್ ಇಮ್ಮಾನುವೆಲ್ ಪ್ರಾರ್ಥನೆ ಹಾಡಿದರು. ಕೇಶ ಸಮರ್ಪಣೆ ಕಾರ್ಯಕ್ಕೆ ಬ್ಯೂಟೀಶಿಯನ್ ಜಿನ್ಸಿ ರಾಜೇಶ್ ಮುಂಡಾಜೆ ಸಹಕರಿಸಿದರು. ಧರ್ಮಪ್ರಾಂತ್ಯದ ವಿವಿಧ ಕಡೆಗಳಿಂದ ಆಗಮಿಸಿ ಕೇಶದಾನ ಮಾಡಿದ 35 ಮಂದಿಗೆ ಪ್ರಮಾಣ ಪತ್ರ, ಫೇಸ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.